ಸರಕಾರವೇ ಪೌರ ಕಾರ್ಮಿಕರನ್ನು ಆತ್ಮಹತ್ಯೆಗೆ ತಳ್ಳಿದೆ

[dropcap]ಗು[/dropcap]ಲ್ಬರ್ಗ ಪೌರ ಆಡಳಿತ ಕಛೇರಿಯ ಮುಂದೆ ಇಂದಿಗೆ 27 ದಿನಗಳಿಂದ ನಗರದ ಪೌರ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಯಾಕೆ?  2 ವರ್ಷಗಳಿಂದ ಕಾನೂನಿನ ಪ್ರಕಾರ ನೀಡಬೇಕಿದ್ದ ಯಾವ ಸವಲತ್ತುಗಳನ್ನೂ ಅವರಿಗೆ ನೀಡದೆ, ದುಡಿಸಿ ಸಂಬಳವನ್ನೂ ಕೊಡದೆ, ಉಪವಾಸ ಕೆಡವಿರುವ ನಗರ ಸಭಾ ಆಡಳಿತದ ವಿರುದ್ಧ ಅವರು ತಮ್ಮ ಜೀವವನ್ನೇ ಪಣವಿಟ್ಟು ಉಪವಾಸ ಹೂಡಿದ್ದಾರೆ. ಸರಕಾರವೇ ಅವರನ್ನು ಆತ್ಮಹತ್ಯೆಗೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಸಹಾ ಆತ್ಮಹತ್ಯೆಗೆ ಪ್ರೇರಣೆ ಮತ್ತು ಒತ್ತಡ ಹೇರಿದ ಅಪರಾಧಕ್ಕೆ ಹೊಣೆಗಾರರಾಗಿದ್ದಾರೆ.  ಶಿಕ್ಷಾರ್ಹರೂ ಆಗುತ್ತಾರೆ. ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಗುಲ್ಬರ್ಗ ಜಿಲ್ಲೆಯವರೇ ಆಗಿದ್ದು ಕಾನೂನು ಪ್ರಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಉಪವಾಸ ಸತ್ಯಾಗ್ರಹದ ನಡುವೆ ಮರಣ ಹೊಂದಿರುವ ದಲಿತ ಕಾರ್ಮಿಕ ಮಹಿಳೆಯ ವಿಚಾರವನ್ನು ಕೇಂದ್ರ ಸರಕಾರ ತನಿಖೆಗೆ ಒಳಪಡಿಸಿ ಅದಕ್ಕೆ ಕಾರಣರಾಗಿರುವರ ಅಸಡ್ಡೆ ಇನ್ನು ಮರುಕಳಿಸದಂತೆ ಕಾನೂನನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ಕಾರ್ಮಿಕರನ್ನು ದುಡಿಸಿ ನ್ಯಾಯವಾದ ವೇತನ ಮತ್ತಿತರ ಸವಲತ್ತುಗಳನ್ನು ಕೊಡದೆ ಸಾಯಿಸುವ ಮಂದಿ ಕರ್ನಾಟಕದಲ್ಲಿ ಅಧಿಕಾರದ ಮರೆಯಲ್ಲಿ ಸಾಕಷ್ಟು ಇದ್ದಾರೆ ಎಂಬ ವಿಚಾರ ಬಯಲಾಗಿದೆ. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅಂಬವ್ವ ಎಂಬ ದಲಿತ  ಮಹಿಳೆ ಸತ್ಯಾಗ್ರಹದ ಮೊದಲನೆಯ ಹುತಾತ್ಮರಾಗಿದ್ದಾರೆ. ಅವರನ್ನು ಬೆಂಬಲಿಸಿದ ಮತ್ತು ನ್ಯಾಯಕ್ಕಾಗಿ ಶಾಂತಿಯುತ ಸುಸಂಘಟಿತ ನ್ಯಾಯಬದ್ದ ಹೋರಾಟ ನಡೆಸಿದವರಿಗೆ ಬೆಂಬಲ ನೀಡಿದ್ದ ಮಾಜಿ ಕಾರ್ಮಿಕ ಸಚಿವ ಹಿರಿಯ ರಾಜಕಾರಿಣಿ ಎಸ್. ಕೆ. ಕಾಂತಾ ಅವರು ಮತ್ತು ಅವರ ಬೆಂಬಲಿಗರು ಬಂಧನಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ಆದ್ಯಂತವಾಗಿ ಎಲ್ಲ ಕಾರ್ಮಿಕ ಸಂಘಟಣೆಗಳು, ಎಲ್ಲ ಜನಪರ ಸಂಘ ಸಂಸ್ಥೆಗಳು, ಎಡ ಪಂಥೀಯ ವಿಚಾರವಂತರು, ಕಾರ್ಯಕರ್ತರು ಈ ಕಡೆಗೆ ಕಾಲ ವಿಳಂಬವಿಲ್ಲದೆ ದೃಷ್ಟಿ ಹರಿಸಬೇಕೆಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಕರ್ನಾಟಕದಲ್ಲಿ ಕಾರ್ಮಿಕ ಚಳುವಳಿಯ ಆರಂಭದ ಕಾಲದಲ್ಲಿಯೇ ಗುಲ್ಬರ್ಗ, ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ. ದಾರವಾಡ, ಉಡುಪಿ ಹಾಗೂ ಇತರ ಅನೇಕ ಕೇಂದ್ರಗಳಲ್ಲಿ ಪೌರ ಕಾರ್ಮಿಕರು ಕೆಂಬಾವುಟದ ಕೆಳಗೆ ಸಂಘಟಿತರಾಗಿ ಹೋರಾಟ ನಡೆಸಿ ಪಡೆದಿದ್ದ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಹಾಗೂ ತಲೆಯ ಮೇಲೆ ಮಲ ಹೊರಿಸುವ ಅಮಾನುಷ ಕ್ರಮಗಳ ನಿಷೇಧವನ್ನು ಜಾರಿ ಗೊಳಿಸಿದ್ದು ನಮಗೆ ಇನ್ನೂ ಮರೆತಿಲ್ಲ. ಕರ್ನಾಟಕ ಸರಕಾರವು ಅಮಾನುಷವಾದ ಕಾರ್ಮಿಕ ವಿರೋಧಿ ಮತ್ತು ದಲಿತ ವಿರೋಧಿ ಮಾರ್ಗವನ್ನು ಕೈ ಬಿಟ್ಟು ದುಡಿಯುವವರ ಹಕ್ಕು ಭಾದ್ಯತೆಗಳನ್ನು ಕಾನೂನು ಕ್ರಮಗಳಿಂದ ಸಂರಕ್ಷಿಸಬೇಕು. ಅಂಬವ್ವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕರ್ನಾಟಕದ ಕಾರ್ಮಿಕ ಸಂಘಟಣೆಗಳು ಈ ವಿಚಾರದಲ್ಲಿ ರಾಜ್ಯವ್ಯಾಪಕ ಚಳುವಳಿಯನ್ನು ನಡೆಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ವಾರ್ತಾಭಾರತಿ ಈ ಬಗ್ಗೆ ತನ್ನ ದಿ.26.5.10 ರ ಸಂಪಾದಕೀಯದ ಮೂಲಕ  ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ತುತ್ಯರ್ಹ.

ಈ ಪ್ರಕರಣಕ್ಕೆ ಸಂಭದಿಸಿ  ಸರಕಾರ ಹೂಡಿರುವ ಎಲ್ಲ ಮೊಕ್ಕದ್ದಮೆಗಳನ್ನು ಹಿಂದೆಗೆದುಕೊಳ್ಳಬೇಕೆಂದೂ, ಬಂಧನದಲ್ಲಿರಿಸಿರುವ ಎಲ್ಲರನ್ನೂ  ಬಿಡುಗಡೆ ಮಾಡಬೇಕೆಂದೂ, ಕಾರ್ಮಿಕರಿಗೆ ಸಲ್ಲಬೇಕಾಗಿರುವ ಎಲ್ಲವನ್ನೂ ಸಲ್ಲಿಸಬೇಕೆಂದೂ ಈ ಮೂಲಕ ಒತ್ತಾಯಿಸುತ್ತೇನೆ.

ಮೇ ದಿನಾಚರಣೆ

[dropcap]ಮೇ[/dropcap] ದಿನಾಚರಣೆಯನ್ನು ಇಂದು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಕಾರ್ಮಿಕ ವರ್ಗದ ಕ್ರಾಂತಿಕಾರಿ ಹೋರಾಟದ ವಾರ್ಷಿಕ ಜಾಗತಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾಗಿರುವ ಐತಿಹಾಸಿಕ ಘಟಣೆಯು ಘಟಿಸಿದ್ದು ಮೇ ತಿಂಗಳ ತಾ.1, 1786 ರಂದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಶಿಕಾಗೊ ನಗರದ ಹೇ ಚೌಕ ಎಂಬಲ್ಲಿ. ಸಾಮ್ರಾಜ್ಯಶಾಹಿ ಅಮೆರಿಕದ ಒಂದು ಪ್ರಮುಖ ನಗರದಲ್ಲಿ ನಡೆದ ಕಾರ್ಮಿಕ ದಮನದ ಈ ಘಟನೆಯು ಅಂತಹ ಮೊತ್ತ ಮೊದಲನೆಯ ಕ್ರೌರ್ಯವಾಗಿತ್ತು,  ಶ್ರಮಜೀವಿಗಳ ಮರ್ದನ, ದೌರ್ಜನ್ಯ ಹಾಗೂ ಮಾನವೀಯ ಮೌಲ್ಯಗಳ ದಮನ ಇತ್ಯಾದಿಗಳ ಆ ಆರಂಭದ ಹೆಜ್ಜೆಯ ಕರಿ ಛಾಯೆಯುಇಂದಿಗೂ ಪ್ರಕಟಗೊಳ್ಳುತ್ತಿರುವುದನ್ನು ಕಾಣಬಹುದು. ಸಾಮ್ರಾಜ್ಯವಾದದ ತುತ್ತ ತುದಿಗೆ ಏರಿ ಜಗತ್ತಿನ ಮೇಲೆ ಪರಮಾಣು ಆಯುಧದಂತಹ ವಿನಾಶಕಾರಿ ಸಾರ್ವಭೌಮ ಅಧಿಕಾರ ಹೊಂದಿರುವ ಸಾಮ್ರಾಜ್ಯವಾದವು ಖಾಸಗಿ ಲಾಭದ ಗಳಿಕೆ ಮತ್ತು ಅಧಿಕಾರ ಒಂದೇ ಪರಮ ಗುರಿಯಾಗಿ ಇರುವಂತಹ ನೆಲೆಗೆ ಬಂದು ತಲುಪಿದೆ. ಅಂದಿನ ಸಾಮ್ರಾಜ್ಯವಾದಕ್ಕೂ ಇಂದಿನ ಒಬಾಮ ನಿರ್ದೇಶಿತ ವಿಶ್ವರಾಜಕಾರಣದ ಪ್ರದರ್ಶನಕ್ಕೂ ಬಹಳ ವ್ಯತ್ಯಾಸವಿದೆ. ಅಂದು ಸಾಮ್ರಾಜ್ಯವಾದದ ಗುರುತು ಇನ್ನೂ ಸ್ಪಷ್ಟ ಸ್ವರೂಪ ಹೊಂದಿರಲಿಲ್ಲ. ಪ್ರಜಾಪ್ರಭುತ್ವದ ಮೊಸಳೆ ಕಣ್ಣೀರಿನ ವಿಷ ಎಂತಹುದೆಂಬುದು ಅಂದು ಪ್ರತ್ಯಕ್ಷವಾಗಿರಲಿಲ್ಲ. ಆದರೆ ಬಂಡವಾಳಶಾಹಿಯೆಂಬ ಒಂದು ಮನುಷ್ಯ ನಿರ್ಮಿತ ಸಮಾಜದ ಸ್ವರೂಪ ಹಾಗೂ ಉತ್ಪಾದನಾ ವಿಧಾನಗಳ ಅಮಾನುಷ ಸ್ವರೂಪ  ಸಾಕಷ್ಟು ಬೆಳಕಿಗೆ ಬಂದಿತ್ತು. ಇಂದು ಎಲ್ಲ ದೇಶಗಳ ಪ್ರಭುತ್ವಗಳು ಸಹಾ ಕಾರ್ಮಿಕರಿಗೆ ಮಾನವೀಯ ಮೌಲ್ಯಗಳ ಅಧಿಕಾರ ಇದೆ ಎಂಬುದಕ್ಕೆ ಬರೇ ಮಾತಿನ ಅಂಗೀಕಾರ ದೊರಕಿರುವುದೇನೋ ನಿಜ. ಆದರೆ ಕಾರ್ಯದಲ್ಲಿ ವಿಶ್ವದ ಮಾನವ ಕೋಟಿಯ ಬದುಕನ್ನು ಸಾಮ್ರಾಜ್ಯವಾದವೆಂಬ ಆಡಳಿತ ಕ್ರಮವು, ರಾಜಕೀಯ ವಿಚಾರವು, ಸಂವಿಧಾನಿಕ ಪ್ರಭುತ್ವಗಳ ಸ್ವರೂಪಗಳು ಎಂತೆಂತಹ ಅಂದ-ಚೆಂದದ ವೇಷಗಳನ್ನು ಧರಿಸಿ ಈ ಧರೆಯಲ್ಲಿ ತಾಂಡವ ನೃತ್ಯ ಆಡುತ್ತಿದೆ. ಭಾರತದ ಮಟ್ಟಿಗಂತೂ ಒಂದೇ ಒಂದು ಪ್ರತ್ಯಕ್ಷ ನಿದರ್ಶನದಿಂದಲೇ  ಅದರ ನಿಜ ಬಣ್ಣವನ್ನು ಬಯಲುಗೊಳಿಸುವುದು ಸಾಧ್ಯವಾಗುತ್ತದೆ.

ಅತೀ ಹಿರಿಯ ಹಾಗೂ ಅತ್ಯಂತ ಉತ್ಕೃಷ್ಟವಾದ ಪ್ರಜಾಪ್ರಭುತ್ವ ಎಂದುಕೊಳ್ಳುವ ಈ ನಾಡಿನಲ್ಲಿ ಒಟ್ಟು ಜನ ಸಂಖ್ಯೆಯ ಶೇ.80 ಮಂದಿ ಪ್ರಜೆಗಳು ತಮ್ಮ ಮತದಾನದಿಂದಲೇ ತಮ್ಮ ಮೇಲೆ ಹೇರಿಕೊಂಡಿರುವ ವ್ಯವಸ್ಥೆಯಲ್ಲಿ ದಿನಕ್ಕೆ 20 ರೂ.ಗಳಲ್ಲಿ ಇಡೀ ದಿನದ ಕಷ್ಟಕಾರ್ಪಣ್ಯಗಳನ್ನು ತುಂಬಿದ ಬದುಕನ್ನು ನಿಭಾಯಿಸಬೇಕಾದ ಶಾಪವನ್ನು ಸುತ್ತಿಕೊಂಡಿದ್ದಾರೆ. ಅದೇ ಸಮಯದಲ್ಲಿ ದಿನಕ್ಕೆ 20 ಕೋಟಿ ರೂ.ಗಳನ್ನೂ ಮೀರಿದ ಆದಾಯ ಮತ್ತು ಐಶಾರಾಮಿ ಜೀವನ ನಡೆಸುವ ಮನುಷ್ಯ ಪ್ರಾಣಿಗಳ ಅಧಿಕಾರದ ಅಡಿಯಲ್ಲಿ ಈ ಜನರು ನರಳುತ್ತಿರುವುದು ಕಂಡುಬರುತ್ತಿದೆ. ಇದು ವಿಶ್ವದ ಬಂಡವಾಳಶಾಹಿ ವ್ಯವಸ್ಥೆಯ ಒಟ್ಟು ಫಲಿತಾಂಶ ಎನ್ನುವಾಗ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಪಥದಲ್ಲಿ ಶೋಷಣೆ ಮರ್ದನೆಗಳನ್ನೆಲ್ಲಾ ಅಳಿಸಿ  ಮಾನವ ಸಂಕುಲದ ಅತ್ಯಂತ ಸುಂದರವಾದ ಕನಸುಗಳನ್ನು ನನಸಾಗಿಸುವ ಪಥದಲ್ಲಿ ಮುಂದೆ ಹೆಜ್ಜೆ ಹಾಕುವುದಕ್ಕೆ ಶ್ರಮಜೀವಿ ವರ್ಗ ಸನ್ನದ್ಧರಾಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಿಚ್ಚಳವಾಗುತ್ತದೆ. ಕಾಲವೇನೋ ಇಂತಹ ಅನೇಕ ಸನ್ನಿಹಿತ ಸಂಧಿ ಘಟ್ಟಗಳನ್ನು ದಾಟಿ ದಾಟಿ ಸಫಲತೆ ಕಾಣದ ಹೆಜ್ಜೆ ಗುರುತುಗಳನ್ನಷ್ಟೇ ಬಿಟ್ಟು ಹೋಗಿದೆ. ಇಂದಿನ ಪರಿಸ್ಥಿತಿಯನ್ನು ಅಂತಹ ಒಂದು ಹೆಜ್ಜೆ ಗುರುತೆಂದು ಹೇಳಬಹುದೆಂದಾದರೂ ಸಹಾ ಅದು ಮಾನವ ಸಂಕುಲದ ಕ್ರಾಂತಿಕಾರಿ ಯುಗ ಪರಿವರ್ತನೆಯ  ಯಶಸ್ಸನ್ನು ಕಾಣುತ್ತದೆಯೋ ಅಥವಾ ಬರಿ ಗುಲ್ಲುಗಳ ಮತ್ತು ಹೊಸ ಸಂಕೋಲೆಗಳ ಸೃಷ್ಟಿಯಾಗಿ ಇನ್ನೂ ದೀರ್ಘ ಕಾಲ ಮನುಷ್ಯನನ್ನು ಪೀಡಿಸುತ್ತಿದೆಯೋ ಎನ್ನುವುದರ ಬಗ್ಗೆ ಆಳವಾಗಿ ಮತ್ತು ವ್ಯಾಪಕವಾಗಿ ಸಮಸ್ತ ಮಾನವ ಸಂಕುಲದ ಇರವು ಅರಿವು ಗಳ ಅವಲೋಕನದಿಂದಷ್ಟೇ ಊಹಿಸಲು ಸಾಧ್ಯವಾಗಬಹುದಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ಇಂದಿನ ದುರಂತಗಳಲ್ಲಿ ಒಂದು ಎಂದರೆ ತಪ್ಪಾಗದು, ಮನುಷ್ಯ ಸಂಕುಲವು ಕ್ರಾಂತಿಕಾರಿ ಪರಿವರ್ತನೆಯ ಹಲವಾರು ಮಜಲುಗಳನ್ನು ದಾಟಿ ಬಂದಿದೆ. ಆದರೆ ಮನುಷ್ಯನು ತನ್ನ ಒಡಲೊಳಗಿನ ಚೇತನದ ಚೇತನ ಎನ್ನಬಹುದಾದ ಉತ್ಕೃಷ್ಟ ಉತ್ಪಾದನಾ ಸಾಮರ್ಥ್ಯ ಮತ್ತು ಶ್ರಮ ಶಕ್ತಿಯನ್ನು ಒಂದು ಅಗ್ಗದ ಸರಕಾಗಿ 3 ಕಾಸಿಗೆ ವಿಕ್ರಯಿಸಿ ಬದುಕಬೇಕಾದಂತಹ ದಾಸ್ಯ ಸಂಕೋಲೆಗಳಿಂದ ಪಾರಾಗುವುದಕ್ಕೆ ಅನೇಕ ಪ್ರಯತ್ನಗಳನ್ನು ನಡೆಸಿ ಜಯಗಳಿಸಿ ದೀರ್ಘ ಕಾಲ ಉಳಿಸಿ ಬೆಳೆಸಿ ಭವ್ಯವಾದ ಸಮಾಜವಾದಿ ವ್ಯವಸ್ಥೆಯೊಂದನ್ನು ಕಟ್ಟಿ ಬೆಳೆಸಿ ಹಿಟ್ಲರ್ ನಂಥಹ ಪಿಶಾಚಿಯೊಂದನ್ನು ನಿರ್ಮೂಲನಗೊಳಿಸಿ ಜಾಗತಿಕ ಜಯದ ಹಂತಕ್ಕೆ ತಲುಪಿದ್ದನ್ನು ಇಂದು ನಾವು ನೆನಪಿಸಿಕೊಳ್ಳಬೇಕು. ವಿಶ್ವಕಾರ್ಮಿಕರು ಒಗ್ಗಟ್ಟಾಗಿ ಸಮಾಜವಾದಿ ವ್ಯವಸ್ಥೆಯನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ಒಂದಾಗಿ ಮಾನವನ ಇರವು ಅರಿವುಗಳು  ಹೋರಾಟದ ಕೆಂಬಾವುಟವಾಗಿ ನಭೋಮಂಡಳದಲ್ಲಿ ಎಂದೆಂದಿಗೂ ಹಾರಾಡುತ್ತಿರುವಂತೆ ಮಾಡುವ ಗುರಿಯನ್ನು ನಮ್ಮದಾಗಿಸೋಣವೇ ಎಂಬ ಪ್ರಶ್ನೆಗೆ ಇಂದು ಸ್ಪಷ್ಟ ಉತ್ತರ ಬೇಕಾಗಿದೆ. ನಮ್ಮೊಳಗಿನ ಕಚ್ಚಾಟದಿಂದ ಕೈ ಕೊಡವಿ ದಾಸ್ಯ ಸಂಕೋಲೆಗೆ ಹತ್ತು ಹಲವು ನಾಮಗಳ ಪಟ್ಟಿಗಳನ್ನು ಬೆಸೆಯುವುದರಲ್ಲಿ ತೃಪ್ತಿ ಗೊಂಡು ಸಾಗುತ್ತಿರುವ ದುರವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಯಾವುದು 224 ನೆಯ ಶಿಕಾಗೋ ಹೋರಾಟದ ಸಂಸ್ಮರಣೆಯ ದಿನಾಚರಣೆಯ ಆಯ್ಕೆ ಎಂಬ ಪ್ರಶ್ನೆ ಇಂದು ನಮ್ಮನ್ನು ದಿಟ್ಟಿಸಿ ನೋಡುತ್ತಿದೆ. ಈ ಕಿರು ಬರಹದಲ್ಲಿ ಅದನ್ನು ಸಮರ್ಪಕವಾಗಿ ಮತ್ತು ಸವಿಸ್ತಾರವಾಗಿ ನಿರೂಪಣೆ  ಮಾಡುವ ಸಾಹಸ ಇದು ಆಗಲಾರದು. ಅದರ ಒಂದು ಕಿರು ಇಣುಕು ನೋಟ ಮಾತ್ರ ಇದಾಗಬಹುದೇನೋ.

2010 ರ ಈ ವರ್ಷದ ಮೇ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಸಂಘಟಿತ ಕಾರ್ಮಿಕ ವರ್ಗವು ಬೆಲೆ ಏರಿಕೆಯ ವಿರುದ್ದ ಮತ್ತು ಬೆಲೆ ಏರಿಕೆಯನ್ನು ಸರಿದೂಗಿಸುವ ಕನಿಷ್ಠ ವೇತನ ಸಹಿತ ತುಟ್ಟಿ ಭತ್ತೆಯ ಹಕ್ಕನ್ನು ಎಲ್ಲ ಶ್ರಮಜೀವಿಗಳು ಪಡೆಯುವಂತೆ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕಾರ್ಯ ತಂತ್ರ ರೂಪಿಸೋಣ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಎಲ್ಲ ಹಕ್ಕುಗಳನ್ನು, ಸೌಲಭ್ಯಗಳನ್ನು ಕಾರ್ಯತ: ಇನ್ನೂ ಪಡೆಯದ ವಿಭಾಗದ ಜನರನ್ನು ಸಂಘಟಿತ ಕಾರ್ಮಿಕ ವಲಯವನ್ನಾಗಿ ಹೋರಾಟಕ್ಕೆ ಇಳಿಸುವುದು ಇಂದಿನ ರಾಷ್ಟೀಯ ಕಾರ್ಮಿಕ ಸಂಘಟಣೆಗಳ ಅಂಗೀಕೃತ ಕರ್ತವ್ಯವಾಗಿದೆ. ಶ್ರಮಜೀವಿಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಇದ್ದಾರೆ. ಅವರು ಮಹಿಳೆಯಾಗಿ ಮಾತ್ರವಲ್ಲ ಶ್ರಮಜೀವಿಗಳಾಗಿಯೂ ಎಲ್ಲ ಬಗೆಯ ಮಾನವೀಯ ಹಕ್ಕುಗಳ ಸೌಲಭ್ಯಗಳ ಗಳಿಕೆಗೂ ಅರ್ಹರಾಗಿದ್ದಾರೆ. ಅವರ ಪೋಷಣೆ, ರಕ್ಷಣೆ, ಸಬಲೀಕರಣ ಇತ್ಯಾದಿಗಳು ಇಂದು ಕಾರ್ಮಿಕ ಸಂಘಟಣೆಗಳ ಚಳುವಳಿಗಳ ಆದ್ಯ ಕರ್ತವ್ಯವೆನಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಪೌಷ್ಟಿಕ ಹಾಗೂ ಸಾಕಷ್ಸ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುವ ಆಹಾರ ಪೂರೈಕೆಯ ಭದ್ರತೆಯು ಇಂದು ಸರಕಾರದ ಕೃತಕ ಬಿಪಿಯಲ್, ಯೆಪಿಯಲ್ ರೇಖೆಗಳಿಂದ ವಿರಹಿತವಾಗಿ ದುಡಿಯುವವರಿಗೆಲ್ಲರಿಗೂ ಕ್ರಮಬದ್ದವಾದ ಪೂರೈಕೆಯ ಹಕ್ಕನ್ನು ಇಂದಿನ ಆಡಳಿತಗಾರರು ಯಾವ ಸಬುಬೂ ನೀಡದೆ ಅನುಸರಿಸಬೇಕಾಗಿದೆ. ಕೊನೆಯದಾಗಿ ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ. ಪ್ರಸ್ತುತ ಮೇ ದಿನ ಈ ದಿಸೆಯಲ್ಲಿ ನಮಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವಂತಾಗಲಿ.

ದುರಂತಕ್ಕೆ ತಲುಪುವ ಮೊದಲು ಎಚ್ಚರವಾಗೋಣ

ಮಾರ್ಚ್ 23, 2010 ರ ವಾರ್ತಾಭಾರತಿಯಲ್ಲಿ ಪ್ರಕಟಿತ ಲೇಖನ)

[dropcap]ನ[/dropcap]ಮ್ಮ ಸಮಾಜದ ಮನೋಸ್ಥಿತಿಯ ಬಗೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ಒಂದು ವಿಶ್ಲೇಷಣೆಯನ್ನು ನೀಡಿ ದ್ದಾರೆ; ‘ಹುಚ್ಚ್ಚು ಮನಸ್ಸಿನ ಹತ್ತು ಮುಖಗಳು’ ಎಂದು, ಅದನ್ನೇ ಒಂದು ಸಂಸ್ಕತ ಶ್ಲೋಕದ ಮೂಲಕ ಅವರು ಚಿತ್ರಿಸಿದ್ದಾರೆ. ‘ಮರ್ಕಟಸ್ಯ ಸುರಾಪಾನಂ ಮದ್ಯೇ ವಶ್ಚೀಕ ತಾಡನಂ, ತನ್ಮದ್ಯೆ ಭೂತ ಸಂಚಾರಂ, ಯದ್ವಾ ತದ್ವಾ ಭವಿಷ್ಯತೀ’ ಹೆಂಡ ಕುಡಿದ ಮಂಗನಿಗೆ ಚೇಳು ಕಡಿಯು ತ್ತದೆ. ಭೂತ ಸಂಚಾರ ಆಗುತ್ತದೆ. ಮತ್ತೆ ನಡೆಯುವುದು ಏನೇನೋ ಎಂದು ಅದರ ಅರ್ಥ. ಇದು ನಮ್ಮನ್ನು ಕಳೆದ 6 ದಶಕ ಗಳಿಂದ ಆಳುತ್ತಾ ಬಂದಿರುವವರ ಹುಚ್ಚು ಮನಸ್ಸಿನ 10ಮುಖಗಳುಳ್ಳ ಆಳ್ವಿಕೆಯ ಪರಿಣಾಮ.

ಅದನ್ನೇ ಕುವೆಂಪುರವರು ಇನ್ನೂ ತೀಕ್ಷ್ಣವಾಗಿ ಹೇಳುತ್ತಾರೆ. ‘ಕರಿಯರದೋ ಬಿಳಿಯರದೋ ಯಾರದ್ದಾದರೆ ಏನು? ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ! ವಿಜಯ ನಗರವೋ, ಮೊಗಲರಾಳ್ವಿಕೆಯೋ ಇಂಗ್ಲಿಷರೋ ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ! ಕತ್ತಿ ಪರದೇಶಿ ಯಾದರೆ ಮಾತ್ರ ನೋವೇ? ನಮ್ಮವರೇ ಹದ ಹಾಕಿ ತಿವಿದರದು ಹೂವೇ?’’ ಈ ಕವಿ ಹದಯದ ಮಾತುಗಳು ಸ್ವಲ್ಪ ಹಳೆಯವು. ಆಗ ಆಳುತ್ತಿದ್ದವರು ಬೇರೆ, ಅನಂತರ ಬಂದವರು ಬೇರೆ ಬೇರೆ. ಈಗ ಇರುವವರು ಸಂಪೂರ್ಣ ಬೇರೆ. ಇವರ ಆಡಳಿತದಲ್ಲಂತೂ ಜನ ನುಚ್ಚು ನೂರಾಗುತ್ತಿದ್ದಾರೆ.

‘‘ರವಿ ಕಾಣದುದಂ ಕವಿ ಕಾಣ್ಬಂಗಡ’’ ಎಂದು ನಮ್ಮ ನಂದಳಿಕೆಯವರು ಸುಮ್ಮನೆ ಪ್ರಶ್ನಿಸಿಲ್ಲ. ಅಂದಿನವರ ನಡೆ ನುಡಿ ಗುರು ತಿಸಿ ಇಂದಿನವರು ಎಲ್ಲಿಗೆ ತಲಪುತ್ತಾರೆ ಎನ್ನುವುದು ಕವಿಗಳು ಅಂದೇ ಗುರುತಿಸಿದ್ದರು. ಮುಂದೆ ಆಗುವ ಅನಾಹುತಗಳನ್ನು ನಾವು ಇಂದಿನ ವರು ತಡೆಗಟ್ಟಬೇಕು. ಗತಕಾಲದ ವೈಭವ ಪುರಾಣ ಹಾಗೂ ಶಾಸ್ತ್ರಗಳೆಂದು ಮನುವಿ ನಂಥವರು ಬರೆದಿಟ್ಟದ್ದನ್ನು ಇಂದು ಆಳುವ ವರು ಪುನರಾವರ್ತನೆ ಮಾಡಲು ಹೊರಟಿದ್ದಾರೆ.

ಅದು ದುರಂತಕ್ಕೆ ತಲುಪುವ ಮೊದಲೇ ನಮ್ಮ ಜನ, ನಮ್ಮ ದುಡಿಮೆಗಾರರು, ನಮ್ಮ ಚಿಂತಕರು ಎಚ್ಚರಗೊಂಡು ಅನಾಹುತವನ್ನು ತಪ್ಪಿಸುವುದಕ್ಕೆ ಸನ್ನದ್ಧರಾಗಬೇಕಾಗಿದೆ.66 ನೆಯ ಅ.ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ನಾಡೋಜ ಪ್ರಶಸ್ತಿ ವಿಜೇತೆ ಗೀತಾ ನಾಗಭೂಷಣ್ ಅವರಿಗಿಂತ ಮತ್ತು ಚೆನ್ನಾಗಿ ಪ್ರತಿಭಟನೆಯ ದ್ವನಿಯೊಂದಿಗೆ ನುಡಿದಿರುವ ಮಾತುಗಳಿಗೆ ನಾನೇನು ಹೆಚ್ಚು ಸೇರಿಸಬೇಕಿಲ್ಲ. ಇಂದಿನ ಆಡಳಿತಗಾರರು ಈಗ ಅನುಸರಿಸುತ್ತಿರುವ ದಾರಿಯಲ್ಲೇ ಈ ನಾಡನ್ನು ಆಳುವ ಅವಕಾಶ ಇನ್ನೂ ನೀಡಿದರೆ ನಮ್ಮನ್ನು ನಾವೇ ಎಂದೂ ಹಿಂದಿರುಗಲಾಗದ ದುರಂತಕ್ಕೆ ತಲುಪಿಸಿದಂತಾಗುತ್ತದೆ.

ಸಕಾಲದಲ್ಲಿ ಎಚ್ಚೆತ್ತು ಎಲ್ಲ ಭೇದ ಭಾವಗಳನ್ನು ಬದಿಗಿಟ್ಟು ನಾಡಿನ ಮತ್ತು ಜನರ ರಕ್ಷಣೆಗೆ ಮತ್ತು ಮುನ್ನಡೆಗೆ ಶ್ರಮ ಜೀವಿ ಹಾಗೂ ಬುದ್ಧಿಜೀವಿ ಜನರು ಇಂದು ಸನ್ನಧರಾಗಬೇಕಾಗಿದೆ. ನಮ್ಮ ರಾಜ್ಯವನ್ನು ಆಳಿರುವ 3 ಮುಖ್ಯ ಪಕ್ಷಗಳು ತಮ್ಮಳಗೆ ಜಗಳವಾಡುತ್ತಾ ಒಳ ಗಿಂದೊಳಗೆ ಕೈ ಜೋಡಿಸುತ್ತಾ ಈ ನಾಡನ್ನು ಎಲ್ಲಿಗೆ ತಲುಪಿಸುತ್ತಾರೆ ಎಂಬುವುದನ್ನು ಅಧ್ಯ ಯನ ಮಾಡುವುದಕ್ಕೆ ನಮ್ಮ ವಿ.ವಿ.ನಿಲಯ ಗಳು ಮುಂದಾಗಬೇಕು. ಕೇಂದ್ರ ಸರಕಾರ ಇದೀಗ ಸಂಸತ್ತಿನ ಮುಂದೆ ನಮ್ಮ ದೇಶಕ್ಕೆ ವಿದೇಶಿ ವಿ.ವಿದ್ಯಾಲಯಗಳ ಮುಕ್ತ ಪ್ರವೇಶಕ್ಕೆ ಹಾಗೂ ವ್ಯವಹಾರ ಕುದುರಿಸುವುದಕ್ಕೆ ಅವ ಕಾಶ ನೀಡಲು ಹೊರಟಿದೆ.

ಕರ್ನಾಟಕವಂತೂ ಈ ದಿಸೆಯಲ್ಲಿ ಮತ್ತೆಲ್ಲರಿಗಿಂತ ಮೊದಲು ವಿದೇಶಿಯರೊಂದಿಗೆ ತಾವೂ ಸೇರಿ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರದ ಜಾಗತೀಕರಣಗೊಳಿ ಸಲು ತಯಾರಾಗಿದೆ. ಸ್ವಾತಂತ್ರ ಬಂದಾಗ ರಾಜ್ಯಕ್ಕೊಂದು ವಿ.ವಿ. ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುವುದಕ್ಕಾಗಿ ಸ್ಥಾಪನೆ ಗೊಂಡಿದ್ದವು. ಇಂದು ಒಂದೇ ರಾಜ್ಯದಲ್ಲಿ ಹತ್ತಾರು ವಿ.ವಿ.ಗಳಿವೆ. ಸಾಲದುದಕ್ಕೆ ಡೀಮ್ಡ್ ಯುನಿವರ್ಸಿಟಿಗಳು ಅಂದರೆ ಪರಿಕಲ್ಪಿತ ವಿ.ವಿ.ಗಳಿವೆ. ಕಲಿಸುವ ವಿಷಯಗಳು ಹಾಗೂ ಕಲಿಸುವವರ ಅರ್ಹತೆಗಳು, ವಿದ್ಯಾರ್ಥಿಗಳಿಂದ ವಸೂಲು ಮಾಡಬಹು ದಾದ ಶುಲ್ಕಗಳು ಏನು, ಎಷ್ಟು ಎಂಬುವುದನ್ನು ಆಯಾ ವಿದ್ಯಾಲಯಗಳೆಂದು ಪರಿಗಣಿಸಲಾ ಗುವ ಅಂಗಡಿಗಳೇ ನಿರ್ಣಯಿಸಬಹುದಾಗಿದೆ. ಹೀಗೆ ಸರಕಾರದಿಂದ ಅಧಿಕಾರ ಪಡೆದಿರುವ ಸಂಸ್ಥೆಗಳು ಅಧಿಕಾರ ಪತ್ರವು ಕೈ ತಲಪಿದ ಮರು ಕ್ಷಣದಲ್ಲಿಯೇ ಸರಕಾರದ ಆಜ್ಞೆಗಳನ್ನು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ವರ್ತಿಸಲು ಆರಂಭಿಸಿವೆ ಎನ್ನು ವುದು ಕಳವಳಕ್ಕೆ ಕಾರಣವಾಗಿದೆ. ಜಾತಿ ಗೊಂದು ಮಠ, ಮಠದ ವ್ಯಾಪ್ತಿಯಲ್ಲಿ ಊರಿ ಗೊಂದು ಸಂಸ್ಥಾನ, ಸಂಸ್ಥಾನಗಳೊಳಗಡೆ ಯೋಗವೋ, ಭೋಗವೋ, ರಾಸಕ್ರೀಡೆಯೋ, ಯಮುನಾ ತೀರದಲ್ಲಿ ನಡೆದಂಥಹ ಮಹಿಳಾ ಮಣಿಗಳ ವಸ್ತ್ರಾಪಹರಣವೋ ಏನು ಬೇಕಾ ದರೂ ನಡೆಯಬಹುದು ಎಂಬ ಧರ್ಮ ಇಂದು ಸಾರ್ವಜನಿಕ ಜೀವನವನ್ನು ಕಲುಷಿತ ಗೊಳಿಸುತ್ತಿದೆ.

ಅದೇ ಸಮಯದಲ್ಲಿ ಸರಕಾರದ ಅನುಮತಿ ಇದ್ದೇ ನಡೆಯುವ ಸಾರ್ವಜನಿಕ ನರ್ತನಗ್ರಹಗಳಲ್ಲಿಯೋ ಪಾನಮಂದಿರಗಳ ಲ್ಲಿಯೋ, ಭೋಜನ ಶಾಲೆಗಳಲ್ಲಿಯೋ ಯಾವುದನ್ನು ತಿನ್ನಬೇಕು, ಯಾವುದನ್ನು ಕುಡಿಯಬೇಕು ಯಾವ ರೀತಿ ಕುಣಿಯಬೇಕು ಎಂಬಿತ್ಯಾದಿಗಳನ್ನೆಲ್ಲ ಧರ್ಮ ಒಂದರ ಹೆಸರಲ್ಲಿ ಧರ್ಮ ಸಂರಕ್ಷಕ ಪರಿವಾರದವರು ದೊಣ್ಣೆ ಹಿಡಿದಾ ದರೂ ಆಚರಣೆಗೆ ತರಿಸುವ ಆಡಳಿತ ಇಂದು ನಡೆಯುತ್ತಿದೆ. ಇದಕ್ಕೆ ಕೊನೆ ಎಲ್ಲಿಯೊ ತಿಳಿ ಯದು. 2010-11ರ ಮುಂಗಡ ಪತ್ರ ಸಲ್ಲಿಸುವುದಕ್ಕಿಂತ ಮೊದಲೇ ಹೆಚ್ಚು ಕಡಿಮೆ ರೂ. 500 ಕೋಟಿಗಿಂತಲೂ ಹೆಚ್ಚು ತಮ್ಮವರೆಂದು ತೋರುವವರಿ ಗೆಲ್ಲ ಖಜಾನೆಯಿಂದ ವಿತರಿಸಿದ ವಿತ್ತ ಸಚಿವರೂ ಆಗಿರುವ ಮುಖ್ಯ ಮಂತ್ರಿಗಳು ಅದಕ್ಕೆ ಲೇಖಾನುದಾನದ ಮೂಲಕ ಒಪ್ಪಿಗೆ ಪಡೆದುದಲ್ಲದೆ ಮುಂದಿನ ವರ್ಷದಲ್ಲಿ ಮುಂಗಡವಾಗಿಯೇ ಕೋರಿರುವಂಥಾಹ ಸಾರ್ವಜನಿಕ ವಿತ್ತದ ದುರ್ವಿನಿಯೋಗದ ಪರಮಾವಧಿಯು ವಿಧಾನ ಸೌಧದಲ್ಲಿ ಪ್ರಕಟವಾಗಿದೆ.

ಮುಂದಿನ ಸಾಲಿನಲ್ಲಿ ಅದೆಷ್ಟು ಯಜ್ಞಗಳು, ಯಾಗಗಳು, ಜಾತ್ರೆಗಳು, ಸಂತೆಗಳು, ಶತಮಾನಗಳ ಹಿಂದೆ ಅರಸರಾಗಿದ್ದವರ ಪಟ್ಟಾಭಿಷೇಕಗಳ ವೈಭವದ ಪುನರುಜ್ಜೀವನಗಳು ನಡೆಯಲಿದೆಯೋ ಕಾದು ನೋಡಬೇಕಿದೆ. ಅವೆಲ್ಲವೂ ಈ ದೇಶದ ಅಭಿವದ್ಧ್ದಿಯ ಸಂಕೇತವೆಂಬ ವಾದವನ್ನಂತೂ ಆಳುವವರು ಶಾಸನ ಸಭೆಗಳಲ್ಲಿ ಮಂಡಿಸಿದ್ದಾಗಿದೆ. ಧ್ವನಿ ಮತದ ಮೂಲಕವೋ, ಮೌನವಾಗಿಯೋ, ಆಪರೇಶನ್ ಕಮಲದ ಪ್ರಯೋಗದಿಂದಲೋ ಅಂಗೀಕಾರ ಪಡೆಯುವ ಪ್ರಯತ್ನ ವಂತೂ ನಡೆದೇ ಇದೆ. ಇದೆಲ್ಲ ಯಾರ ತಪ್ತಿಗಾಗಿ, ಯಾರ ಪೋಷಣೆಗಾಗಿ ಎನ್ನುವ ಪ್ರಶ್ನೆ ಮಾತ್ರ ನಮ್ಮನ್ನು ಕಾಡುತ್ತದೆ.

ನಮ್ಮ ದೇಶದ ಪೂರ್ತಿಯಾಗಿ ಪೆಟ್ರೋಲ್, ಡೀಸೆಲ್, ಮತ್ತಿತರ ರಾಸಾ ಯನಿಕ ಉತ್ಪನ್ನಗಳ ಬೆಲೆ ಏರಿಕೆಯಿಂದ ಎಲ್ಲಾ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಚಾಲನೆ ನೀಡಲಾಗಿದೆ. ಸರಕಾರಿ ಮತ್ತು ಖಾಸಗಿ ಸಾರಿಗೆಯ ವೆಚ್ಚ ತೀವ್ರವಾಗಿ ಏರಿಕೆಯಾಗಿದೆ. ರೈತರಿಗೆ ಸಹಾಯವಾಗುವ ಮುಸುಕಿನೊಳಗೆ ಹಾಲಿನ ಬೆಲೆ ಏರಿಸಿರುವುದು ಮಕ್ಕಳಿಗೂ, ವದ್ಧರಿಗೂ ಮಾರಕವಾಗುವಂಥ ಪರಿಣಾಮವನ್ನು ಉಂಟುಮಾಡುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರವೇಶ ದೊರಕಬೇಕಾದರೆ ಶುಲ್ಕ ತೆರಬೇಕೆಂಬ ನಿಯಮದ ಜೊತೆಗೆ ಔಷಧಿಗಳನ್ನೂ ಹಾಗೂ ಇತರ ಆವಶ್ಯಕ ವಸ್ತುಗಳನ್ನು ಪಡೆದು ಕೊಳ್ಳುವುದಕ್ಕೆ ಬೆಲೆ ತೆರಬೇಕಾದಂಥ ಕ್ರಮ ಜಾರಿಗೆ ಬಂದಿದೆ. ಉತ್ಸವಗಳಿಗೆ ಸರಕಾರದ ಬೊಕ್ಕಸದಿಂದ ಹಣ ನೀಡು ವುದಕ್ಕೆ ಬದಲಾಗಿ ಆ ಹಣವನ್ನು ಮಕ್ಕಳಿಗೂ ರೋಗಿಗಳಿಗೂ ಔಷಧೋಪಚಾರಕ್ಕೆ ಮತ್ತು ಚಿಕಿತ್ಸೆಗೆ ನೀಡಿದರೆ ಮುಂದಿನ ಚುನಾವಣೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂಬ ತರ್ಕ ಇಂದಿನ ಸರಕಾರದ್ದಾಗಿದ್ದಂತಿದೆ. ಕೇಂದ್ರ ಸರಕಾರಕ್ಕೆ ಮೊರೆ ಇಡೋಣ ಎಂದರೆ ಅಲ್ಲಿಯೂ ಪಕ್ಷ ಬೇರೆಯಾದರೂ ಆರ್ಥಿಕ ನೀತಿ, ಆಡಳಿತ ರೀತಿ ಇಲ್ಲಿಯವರಂಥದ್ದೇ ಆಗಿರುತ್ತದೆ ಎಂದು ಹೇಳಬೇಕಾಗುತ್ತದೆ.

ಮುಂಗಡ ಪತ್ರದಲ್ಲಿ ಬೆಲೆ ಏರಿಕೆ ತಡೆ ಗಟ್ಟುವ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಭಾಷಣ ಮಾತ್ರ ಬಿಗಿಯುವ ಹಳೆಯ ಜಾಡನ್ನು ಮುಂದುವರಿಸಿದೆ. ದುಬಾರಿ ಬೆಲೆ ತೆತ್ತು ಆಹಾರ ವಸ್ತುಗಳನ್ನು ವಿದೇಶಗಳಿಂದ ಆಮದುಮಾಡಿಕೊಳ್ಳುವ ದು:ಸ್ಥಿತಿಗೆ ನಮ್ಮ ದೇಶವನ್ನು ನಮ್ಮನ್ನು ಆಳುವವರು ತಂದು ನಿಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದ ಈ ನಾಡು ಇಂದು ಕೄಷಿ ಉತ್ಪಾದನೆಯೇ ಅಸಾಧ್ಯ ಎಂಬ ನೆಲೆಗೆ ಬಂದು ನಿಂತಿದೆ. ರಸಗೊಬ್ಬರಗಳು, ರಾಸಾಯನಿಕ ವಸ್ತುಗಳ ಬಳಕೆ ಮಿತಿ ಮೀರಬಾರದು ನಿಜ. ಆದರೆ ಸಂಪೂರ್ಣ ನಿಷೆೇಧಗೊಂಡರೆ ಕೄಷಿಕನ ಭೂಮಿಯಲ್ಲಿ ಬೆಳೆ ಬರುವುದಾದರೂ ಹೇಗೆ? ಕರ್ನಾಟಕದ ಕೆಲವು ಕಡೆಗಳಲ್ಲಿ ರಸಗೊಬ್ಬರಕ್ಕೋಸ್ಕರ ಚಳವಳಿ ನಡೆಸಿದ ರೈತರಿಗೆ ಬಂದೂಕಿನ ಗುಂಡು ಉಡುಗೊರೆ ಸಿಕ್ಕಿದ್ದು ನೆನಪಿದೆಯಷ್ಟೇ! ಸಾವಯವ ಗೊಬ್ಬರದ ಬಗ್ಗೆ ಮಾತನಾಡುವ ಕಷಿ ಅಧಿಕಾರಿಗಳಿಗೆ ಅದಕ್ಕೆ ಬೇಕಾದಂಥ ಪರಿಸರವನ್ನು ಈ ಹಿಂದೆ ಸಂಪೂರ್ಣ ಹಾಳುಗೆಡವಲಾಗಿದೆ ಎಂಬ ವಿಷಯ ಗೊತ್ತಿಲ್ಲವೇನು?ಜಾನುವಾರು ಸಾಕಲು ಸಾಧ್ಯವೇ ಇಲ್ಲದ ರೈತ ಉಳುಮೆ ಮಾಡಲಾಗದೆ ಕಂಗಾಲಾಗಿದ್ದಾನೆ. ಹಸಿರು ಗೊಬ್ಬರಕ್ಕೆ ಬೇಕಾದ ಸೊಪ್ಪು ಸೊದೆಗಳು ಬೆಳೆಯುವಂಥ ಬೆಟ್ಟ ಗುಡ್ಡಗಳು ಇಂದು ಬೋಳು ಗುಡ್ಡೆಗಳಾಗಿವೆ. ಕೃಷಿ ಭೂಮಿಯು ಕೃಷಿಯೇತರ ಉದ್ದೇಶಗಳಿಗೆಂದು ತುಂಡು ತುಂಡಾಗಿ ಮಾರಾಟವಾಗಿ ಹೋಗಿದೆ.

ದ.ಕನ್ನಡದ ಮತ್ತು ಮಲೆನಾಡಿನ ನದಿಗಳು ಹರಿಯುವ ಖಣಿವೆಗಳಂತೂ ಬರಡು ಭೂಮಿಯಾಗುವಂತೆ ನದಿಗಳನ್ನು ತಮ್ಮ ಜಮೀನುಗಳಿಗೆ ಹರಿಸುವ ಹುನ್ನಾರವನ್ನು ಇಂದಿನ ಆಳುವವರು ಬಹುಮಟ್ಟಿಗೆ ಗುಟ್ಟಿನಲ್ಲಿ ಜರಗಿಸುತ್ತಿದ್ದಾರೆ. ಹೀಗಿರುವಾಗ ಸಾವಯವ ಕೃಷಿಯ ಮಾತು ಬರೇ ಮೊಣ ಕೈಗೆ ಬೆಲ್ಲ ಸವರುವ ಹುನ್ನಾರವಲ್ಲದೆ ಮತ್ತೇನು? ಸರಕಾರದ ರೀತಿ ನೀತಿಗಳು ಬದಲಾಗಬೇಕು, ಜನರ ಆರ್ಥಿಕ ಸುಧಾರಣೆಯೊಂದಿಗೆ ಹಾಗೂ ಬದುಕು ಆರೋಗ್ಯ, ಶಿಕ್ಷಣ, ಸಮನ್ವಯತೆಗಳ ಬೆಳವಣಿಗೆಯೊಂದಿಗೆ ಸ್ವಾವಲಂಬನೆ ಮತ್ತು ಆಂತರಿಕ ಸಂಪನ್ಮೂಲಗಳ ಸದ್ಬಳಕೆ ಮುಖ್ಯವಾಗಿರುವಂಥ ಅಭಿವದ್ಧಿ, ಮಾರ್ಗಗಳ ಯೋಜನೆಗಳನ್ನು ಸರಕಾರಗಳು ಮುಂದಿಟ್ಟು ಅನುಮತಿ ಪಡೆಯಬೇಕು. ಅದರಂತೆ ಸಾರ್ವಜನಿಕರ ಕೂಡುವಿಕೆಯಿಂದ ಅವುಗಳನ್ನು ನೆರವೇರಿಸಬೇಕು. ಪಂಚಾಯತ್ ಮಟ್ಟದಿಂದ ಸಂಸತ್ತಿನ ಮಟ್ಟದವರೆಗೆ. ಈ ದೃಷ್ಟಿಕೋನದಿಂದ ಅಧಿಕಾರದಲ್ಲಿರುವವರು ವರ್ತಿಸಿದಾಗ ದೇಶವು ಮುನ್ನಡೆಯುತ್ತದೆ.

ಅಲ್ಲವಾದರೆ ಕೋಮು, ಜಾತಿ, ಲಿಂಗ, ಪ್ರಾದೇಶಿಕತೆ, ಭಾಷೆ, ಯಾವು ಯಾವುದೋ ಕಾರಣಗಳನ್ನು ಮುಂದೊಡ್ಡಿ ಜನರನ್ನು ಛಿದ್ರಗೊಳಿಸಿ ಉಳ್ಳವರು ಅಧಿಕಾರಸ್ಥರು ಈ ನಾಡಿನ ಭವಿಷ್ಯತ್ತನ್ನು ಹಿಂದಿರುಗಿಸಲಾರದಂತಹ ಅಧೋಗತಿಗೆ ತಲಪಿಸುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಕಾಲ ಮೀರುವ ಮೊದಲೇ ಎಚ್ಚರವಾಗೋಣ, ಒಂದಾಗೋಣ, ವಿಚಾರ ಮಾಡೋಣ, ಕಾರ್ಯಪ್ರವತ್ತರಾಗೋಣ. ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯತ್ತು ನಮ್ಮ ಕೈಯಲ್ಲೇ ಇದೆ. ನಮ್ಮ ಭೂಮಿ, ನಮ್ಮ ಖನಿಜಗಳು, ನಮ್ಮ ನೆಲ, ಜಲ, ಸಂಪತ್ತುಗಳನ್ನೆಲ್ಲ ತಮ್ಮ ಲಾಭಕ್ಕ್ಕಾಗಿ ಕೊಳ್ಳೆ ಹೊಡೆಯುವವರ ಅಧಿಕಾರ ಯಾವರಾಜ್ಯದಲ್ಲೇ ಆಗಲಿ, ಕೇಂದ್ರದಲ್ಲೇ ಆಗಲಿ ಕೊನೆಗಾಣಬೇಕೆಂಬ ಗುರಿಯಿಟ್ಟುಕೊಂಡು ಹೋರಾಟಕ್ಕೆ ಸನ್ನದ್ಧರಾಗುವುದು ಇಂದಿನ ಯುವಜನರ, ಶ್ರಮಜೀವಿಗಳ ಮತ್ತು ಬುದ್ಧಿಜೀವಿಗಳ ಕರ್ತವ್ಯವಾಗಿದೆ. ಇದು ನಮ್ಮ ಕನ್ನಡ ಜನರ ಪರಂಪರೆ. ಕುವೆಂಪುರವರನ್ನು ಅನುಸರಿಸಿ ಹೇಳುವುದಾರೆ ನೂರು ಶಾಸ್ತ್ರಗಳನ್ನು, ಮನುಧರ್ಮ ಶಾಸ್ತ್ರವನ್ನು, ಕೌಟಿಲ್ಯನ ಅರ್ಥಶಾಸ್ತ್ರವನ್ನು, ಕಷ್ಣದೇವರಾಯನ ಆಡಳಿತ ವೈಖರಿಯನ್ನೂ ಬದಿಗಿಟ್ಟು ಭಾರತದ ಏಕತೆ, ರಾಜ್ಯದ ಜನರ ಐಕ್ಯತೆ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಇವುಗಳಿಗೆ ಗುರಿ ಇಟ್ಟು ಆಡಳಿತ ನಡೆಯುವಂತಾಗಲು ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣ.