17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

(ಬರೆದದ್ದು ಜನವರಿ 10, 2012)

ಮಾನ್ಯ ಜಿಲಾಧಿಕಾರಿಗಳು,
ದ ಕ ಜಿಲ್ಲೆ, ಮಂಗಳೂರು.
ಇವರಿಗೆ

ಮಾನ್ಯರೇ,

ವಿಷಯ: 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಶುಭಕಾಮನೆಗಳು

ತಮ್ಮ ಆಶ್ರಯದಲ್ಲಿ ಇದೇ ತಿಂಗಳ ದಿ.12 ರಿಂದ 16 ರವರೆಗೆ ಜರುಗುವ 17ನೇಯ ರಾಷ್ಟ್ರೀಯ ಯುವಜನೋತ್ಸದಲ್ಲಿ ಪಾಲ್ಗೊಳ್ಳಲು ತಾವು ನನಗೆ ಕಳುಹಿಸಿದ ಆಮಂತ್ರಣವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಅನಾರೋಗ್ಯದ ನಿಮಿತ್ತ ಸದರಿ ಉತ್ಸವಕ್ಕೆ ಖುದ್ದಾಗಿ ಹಾಜರಾಗಲು ಅಸಮರ್ಥನಾದುದರಿಂದ ತಮ್ಮ ಕಾರ್ಯಕ್ಕೆ ಈ ಶುಭಕಾಮನೆಗಳನ್ನು ಕಳುಹಿಸುತ್ತಿದ್ದೇನೆ.

ನಮ್ಮ ಯುವಜನರು ದೇಶದ ಪ್ರಗತಿಪರ, ರಚನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಮೂಢನಂಬಿಕೆ, ಜಾತಿಬೇಧ, ಕೋಮು ವೈಷಮ್ಯ, ಪ್ರಾಂತೀಯ ಸಂಕುಚಿತ ಭಾವನೆಗಳೆಲ್ಲವುಗಳನ್ನು ಹಿಮ್ಮಟ್ಟಿ, ಜಾತ್ಯಾತೀತ, ವರ್ಗಬೇಧ, ಶೋಷಣೆ  ಭ್ರಷ್ಟಾಚಾರ ರಹಿತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಈ ಉತ್ಸವವು ಪ್ರೇರೇಪಣೆಯಾಗಲಿ ಎಂಬ ಹೆಬ್ಬಯಕೆಯಿಂದ ಉತ್ಸವಕ್ಕೆ ನನ್ನ ಶುಭಕಾಮನೆಗಳನ್ನು ಕೋರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಬಿ ವಿ ಕಕ್ಕಿಲ್ಲಾಯ.