Writings : ಕೃತಿಗಳು

BV Kakkilaya was also an accomplished writer. ಬಿವಿ ಕಕ್ಕಿಲ್ಲಾಯರು ಓರ್ವ ಅತ್ಯುತ್ತಮ ಲೇಖಕರೂ ಆಗಿದ್ದರು.

He was one of the first to introduce left and progressive literature in Kannada. By establishing Navakarnataka Publications, he played a key role in spreading progressive literature to every household in Karnataka. His books have been awarded several prizes, including the Kannada Sahitya Academy honours.

ಎಡ ಹಾಗೂ ಪ್ರಗತಿಪರ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಷ್ಟೇ ಅಲ್ಲದೆ, ನವಕರ್ನಾಟಕ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಕನ್ನಡಿಗರ ಮನೆಮನೆಗೆ ವೈಚಾರಿಕ ಸಾಹಿತ್ಯವು ತಲುಪುವುದಕ್ಕೆ ಅವರು ನೀಡಿರುವ ಕೊಡೂಗೆ ಅತ್ಯಪಾರವಾದುದು. ಕಕ್ಕಿಲ್ಲಾಯರು ಬರೆದಿರುವ ಹಾಗೂ ಅನುವಾದಿಸಿರುವ ಕೃತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿಯದೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಬಿ ವಿ ಕಕ್ಕಿಲ್ಲಾಯರ ಕೃತಿಗಳು

1. ಕಮ್ಯುನಿಸಂ (1954,1978,1984,2006)

2.ಭೂಮಿ ಮತ್ತು ಆಕಾಶ (ಅನುವಾದ; ಮೂಲ: ವೋಲ್ಕೋವ್) (1963)

3.ಮಾನವನ ನಡಿಗೆ, ವಿಜ್ಞಾನದೆಡೆಗೆ

4. ದ್ವಂದ್ವಮಾನ ಚಾರಿತ್ರಿಕ ಭೌತಿಕವಾದ


5.ಕಾರ್ಲ್ ಮಾರ್ಕ್ಸ್ : ಬದುಕು, ಬರಹ (1985, ಎರಡನೇ ಮುದ್ರಣ: 2019) (ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ ಪಡೆದ ಕೃತಿ)

6. ಫ್ರೆಡರಿಕ್ ಎಂಗೆಲ್ಸ್: ಜೀವನ, ಚಿಂತನ (1986) (ಕರ್ನಾಟಕ ಸಾಹಿತ್ಯ ಅಕಾಡೆಮಿಯ 1986ರ ಉತ್ತಮ ಕೃತಿ [ಜೀವನ ಚರಿತ್ರೆ] ಪ್ರಶಸ್ತಿ)

7.ಇರವು ಮತ್ತು ಅರಿವು (ಅನುವಾದ) (1988,2004)

8. ಭಾರತೀಯ ಚಿಂತನೆ, ಹಿಂದೂ ಧರ್ಮ, ಕಮ್ಯೂನಿಸಂ (1989)

9.ಪ್ರಾಚೀನ ಭಾರತದಲ್ಲಿ ಭೌತಿಕವಾದ (1989,2006) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1989ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ-ಸೃಜನೇತರ] ಪ್ರಶಸ್ತಿ)

10.ಬಾಬ್ರಿ ಮಸೀದಿ, ರಾಮಜನ್ಮ ಭೂಮಿ ವಿವಾದ (1989) (ಅನುವಾದ; ಮೂಲ:ಸಿ. ರಾಜೇಶ್ವರ ರಾವ್)

11. ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ (1990) (ಅನುವಾದ; ಮೂಲ: ಇರ್ಫಾನ್ ಹಬೀಬ್)

12.ಭಾರತೀಯ ದರ್ಶನಗಳು (1994,1996) (ಅನುವಾದ; ಮೂಲ: ಡಾ|ದೇವಿಪ್ರಸಾದ್ ಚಟ್ಟೋಪಾಧ್ಯಾಯ) (1994ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೃತಿ [ಅನುವಾದ – 2] ಪ್ರಶಸ್ತಿ)

13. ಭಾರತಕ್ಕೊಂದು ಬದಲು ದಾರಿ (1997)

14. ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು (1997)

15. ಬರೆಯದ ದಿನಚರಿಯ ಮರೆಯದ ಪುಟಗಳು (ಆತ್ಮಕಥೆ) (2003)

16. ಅಸ್ವಸ್ಥ ಬಂಡವಾಳಶಾಹಿ ಸಮಾಜದ ನಿಜರೂಪ

17. ದಲಿತರ ಸಮಸ್ಯೆಗಳು ಮತ್ತು ಪರಿಹಾರ  (2008, ಅನುವಾದ; ಮೂಲ: ಡಿ. ರಾಜಾ)
18. ಭಾರತದ ಮುಸ್ಲಿಮರು (ಸಾಚಾರ್ ಸಮಿತಿ ವರದಿ) (2008, ಅನುವಾದ: ಮೂಲ: ಶಮೀಮ್ ಫೈಜೀ)