ಭಗವದ್ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಸ್ತಾಪದ ಕುರಿತು ಒಂದು ಅವಲೋಕನ

[dropcap]ಭ[/dropcap]ಗವದ್ಗೀತೆಯು ಒಂದು ಉತ್ತಮ ಸಾಹಿತ್ಯಿಕ ಕೃತಿ ಎನ್ನುವುದು ನಿಜ ಮತ್ತು ಅದು ಯಾರನ್ನಾದರೂ ಮನ ಮೆಚ್ಚಿಸುವ ಸಾಮರ್ಥ್ಯವಿರುವ ಒಂದು ಸುಂದರ ಕವನ ಗುಚ್ಛವಾಗಿದೆ. ಆದರೆ ಅದರಲ್ಲಿ ಪರಸ್ಪರ ವೈರುಧ್ಯದ ಹಲವು ಆಶಯಗಳು ಮತ್ತು ಉಪದೇಶಗಳು ಅಡಕವಾಗಿವೆ.  ಈ ಗೀತೆಯು ಒಂದು ಧರ್ಮದ ಸಲುವಾಗಿ ನಡೆದ ಧರ್ಮಯುದ್ಧದ ಭಾಗವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವುದಕ್ಕೆ ಆರಂಭದಿಂದಲೇ ತಂತ್ರಗಳು ನಡೆದಿದ್ದುದನ್ನು ನಾವು ಕಾಣಬಹುದು. ಇದರಲ್ಲಿ ನಮ್ಮ ನಿಮ್ಮೆಲ್ಲರನ್ನು ಆಕರ್ಷಿಸುವ ಕೃಷ್ಣನು ಬೋಧಿಸುವ ಧರ್ಮ ಯುದ್ಧವು ಅಧರ್ಮದ ವಿರುದ್ಧದ ಯುದ್ದ ಅಲ್ಲ, ಬದಲಿಗೆ ವರ್ಗ ಸಂಘರ್ಷಗಳನ್ನು ವರ್ಣ ಸಂಘರ್ಷಗಳನ್ನಾಗಿ ಚಿತ್ರಿಸಿ ಅದನ್ನು ತೊಡೆದು ಹಾಕುವುದು ಧರ್ಮವೆಂದು ಬೋಧಿಸುವುದು ಮತ್ತು ಒಂದು ವ್ಯವಸ್ಥೆಯನ್ನು ದೃಢಗೊಳಿಸುವ ತಂತ್ರವು ಅದರಲ್ಲಿ ಒಳಗೊಂಡಿರುವುದು ಎನ್ನುವುದನ್ನು  ವಿವೇಚನಾಶೀಲರು ಅರ್ಥೈಸಬಲ್ಲರು.

ತನ್ನ ರಥವು ಯುದ್ಧ ಭೂಮಿಯ ಮದ್ಯೆ ನಿಂತಿರಲು ಅರ್ಜುನನು, ತನ್ನ ಬಾಂಧವರನ್ನು, ಗುರು ಹಿರಿಯರನ್ನು, ಅಣ್ಣ ತಮ್ಮಂದಿರನ್ನು, ಸ್ವಜಾತಿಬಾಂಧವರನ್ನು ಕೊಂದು ರಾಜ್ಯವನ್ನು ಗೆಲ್ಲುವ ಯುದ್ದಕ್ಕೆ ಹೊರಟಿದ್ದೇವೆ, ಈ ಕೆಲಸ ನನ್ನಿಂದಾಗದು ಎನ್ನಲು ಕೃಷ್ಣನು ಅರ್ಜುನನನ್ನು ಯುದ್ದಕ್ಕೆ ಹುರಿದುಂಬಿಸುತ್ತಾನೆ ಮತ್ತು ಅದು ಅವನ ಕರ್ತವ್ಯವೆಂದು ತಿಳಿಸುತ್ತಾ ಅನೇಕ ಧರ್ಮ, ಅಧರ್ಮಗಳ ಬೋಧನೆಗಳನ್ನು ಮಾಡುತ್ತಾನೆ. ಅವುಗಳ ಕೆಲವು ಸಾಲುಗಳು ಇಂತಿವೆ:

ಅಥ ಚೇತ್ತ್ವಮಿಮಂ ದರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತ: ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||

ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮೀ ಯುಗೇ ಯುಗೇ ||

ಶ್ರೇಯಾನ್ ಸ್ವಧರ್ಮೋ ವಿಗುಣ್: ಪರಧರ್ಮಾತ್ಸ್ವ್ನುಷ್ಠ್ತಾತಾತ್|
ಸ್ವಧರ್ಮೇ ನಿಧನಂ ಶ್ರೇಯ: ಪರಧರ್ಮೋ ಭಯಾವಹ: ||

ಕರ್ಮಣೈಯವ ಅಧಿಕಾರಸ್ಠೇ ಮಾಫಲೇಷು ಕದಾಚನ:
ಮಾ ಕರ್ಮ ಫಲ ಹೇತುರ್‘ಭು ಮಾತೇ ಸಂಗೋಪ ಕರ್ಮಣಿ ||

ಸರ್ವಧರ್ಮಾನ್ ಪರಿತ್ಯಜ ಮಾಮೇಕಂ ಶರಣಂವೃಜಾ
ಅಹಂ ತವ ಸರ್ವಪಾಪೇಬ್ಸೇ ಮೋಕ್ಷ‘ಇಷ್ಯಾಮಿ ಮಾಶುಜಾ ||

ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವುದಿದು:

ಒಂದು ವೇಳೆ ನೀನು ಈ ಧರ್ಮಯುದ್ಧವನ್ನು ಮಾಡದೇ ಹೋದರೆ ನೀನು ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಗಳಿಸುತ್ತೀ.

ಚಾತುರ್ವರ್ಣ್ಯವೆಂಬ ವರ್ಗಗಳನ್ನು ಸೃಷ್ಠಿಸಿದವನು ನಾನು. ಗುಣ ಕರ್ಮಗಳನ್ನು ನೋಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವೆಂಬ ನಾಲ್ಕು ವರ್ಗಗಳಾಗಿ ಈ ಮನುಷ್ಯ ಕುಲವನ್ನು ವಿಂಗಡಿಸಿದವನು ನಾನು ಮತ್ತು ಅದರ ಒಂದು ವಿಭಾಗಕ್ಕೆ ಸೇರಿದವನು ನೀನು ಮತ್ತು ಯುದ್ಧವನ್ನು ಮಾಡುವುದು ನಿನ್ನ ಧರ್ಮ ಅಲ್ಲದೆ ಈಗ ಯುದ್ಧ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಮತ್ತು ಯಾವಾಗಲೆಲ್ಲ [ಚಾತುರ್ವರ್ಣ್ಯ] ಧರ್ಮಕ್ಕೆ ಹಾನಿ ಉಂಟಾಗಿ ಅಧರ್ಮವು ಮೇಲೇಳುವುದೋ ಆವಾಗಲೆಲ್ಲಾ ಅದಕ್ಕೆ ಬಲಿಯಾದವರನ್ನೆಲ್ಲಾ ರಕ್ಷಿಸಲಿಕ್ಕೆ ಮತ್ತು ದುಷ್ಕರ್ಮಿಗಳನ್ನು ನಾಶಗೊಳಿಸಲಿಕ್ಕೆ ನಾನು ಕಾಲ ಕಾಲಕ್ಕೆ ಹುಟ್ಟಿ ಬರುತ್ತೇನೆ ಎನ್ನುತ್ತಾನೆ.

ಅಂದರೆ ಶ್ರೀ ಕೃಷ್ಣನೇ ಸೃಷ್ಠಿಸಿದ ಚಾತುರ್ವರ್ಣ್ಯಗಳಲ್ಲಿರುವ ಅಸಮಾನತೆ ಮತ್ತು ಬೇಧಗಳನ್ನು ವಿರೋಧಿಸಿ ಸಮಾನತೆ,  ಸೌಹಾರ್ಧತೆಗಾಗಿ ಸಂಘರ್ಷಿಸುತ್ತಿರುವ ದಲಿತರು, ಹಿಂದುಳಿದವರು, ಅಹಿಂದುಗಳು ಮತ್ತಿತರರನ್ನು ನಾಶಗೊಳಿಸಲಿಕ್ಕೆ ಈಗ ಮತ್ತೆ ಹುಟ್ಟಿಬರಲು ಕಾಲ ಸನ್ನಿಹಿತವಾಗಿದೆ. ಮಹಾಭಾರತ ಯುದ್ಧ ನಡೆದದ್ದೇ ಚಾತುರ್ವರ್ಣ್ಯಗಳ ಧರ್ಮ ಆಧಾರಿತ ಸಮಾಜ ವ್ಯವಸ್ಥೆಯನ್ನು ಸಂರಕ್ಷಿಸುವುದಕ್ಕೇ ಎಂದು ಭಗವದ್ಗೀತೆಯಲ್ಲಿನ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು.

ಎಲೇ ಅರ್ಜುನ ಎಲ್ಲಾ ಧರ್ಮಗಳನ್ನೂ ನಂಬಿಕೆಗಳನ್ನೂ, ಕರ್ತವ್ಯಗಳನ್ನೂ ಮರೆತು ನನಗೆ ಶರಣಾಗತನಾಗಿ ನಾನು ಬೋಧಿಸಿದಂತೆ ಮಾಡು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ, ಅಧರ್ಮ ವರ್ತನೆಗಳಿಂದಲೂ ವಿಮುಕ್ತಿಗೊಳಿಸುತ್ತೇನೆ ಎನ್ನುತ್ತಾ ಆತನನ್ನು ಕೇವಲ ತನ್ನ  ಆಜ್ಞಾನಿಷ್ಠನನ್ನಾಗಿಸಿಕೊಳ್ಳುತ್ತಾನೆ.

ಪರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಗುಣವಿಲ್ಲದ ತನ್ನ ಧರ್ಮವೇ ಶ್ರೇಷ್ಠ ಮತ್ತು ಅದರಲ್ಲಿಯೇ ಸಾಯುವುದೂ ಶ್ರೇಯಸ್ಕರ ಎಂಬ ಉಲ್ಲೇಖಗಳನ್ನು ಮತಾಂತರ ವಿರೋಧಿಗಳು, ಸಂಘಪರಿವಾರದವರು ಮನನ ಮಾಡಿಕೊಂಡರೆ ನಡೆಯುತ್ತಿರುವ ದೊಂಬಿ, ಘರ್ಷಣೆಗಳು ತಕ್ಕ ಮಟ್ಟಿಗಾದರೂ ಕಡಿಮೆಯಾಗಬಹುದು.

ಮಾತಿನ ಮೋಡಿಯಿಂದ ಕೃಷ್ಣನು ಮೂಢ ನಂಬಿಕೆಯನ್ನೇ ಅರ್ಜುನನಲ್ಲಿ ಸೃಷ್ಠಿಸುತ್ತಾನೆ. ಒಟ್ಟಿನಲ್ಲಿ ಭಗವತ್ ಗೀತೆಯು ಮೂಢರ ಅಂಧ ವಿಶ್ವಾಸಕ್ಕೆ ಮಾತ್ರ ಸೀಮಿತವಾಗಿದ್ದು,  ಕುರುಡು ನಂಬಿಕೆಯವರಿಗೆ ಮಾತಿನ ಮೋಡಿಯ ಬಲೆ ಬೀಸುತ್ತದೆ ಎನ್ನುವುದು ಕೃಷ್ಣನು ನೀಡುವ ನಾನಾ ತರದ ವಿವರಣೆಗಳಿಂದ ಸ್ಪಷ್ಟವಾಗುತ್ತದೆ  ಅಲ್ಲದೆ ವಿಚಾರವಂತರಿಗೆ ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಬೇರೊಬ್ಬರು ಆಜ್ಞಾಪಿಸುವ ಕಾರ್ಯವನ್ನು ಜಾರಿ ಮಾಡುವ ಅರ್ಹತೆ ಮಾತ್ರವೇ  ಅವನಿಗಿದ್ದು ಅದಕ್ಕೆ ಫಲವನ್ನು ಅಪೇಕ್ಷಿಸುವ ಅಧಿಕಾರವೂ ಇಲ್ಲ ಎನ್ನುವುದರಲ್ಲಿ ಅಡಗಿದೆ ಗುಲಾಮಗಿರಿಯ ಪರಕಾಷ್ಟೆ.

ಭಗವತ್ ಗೀತೆಯು ರಾಷ್ಟೀಯ ಸ್ವಾತಂತ್ರ ಸಂಗ್ರಾಮದ ರಾಷ್ಟ್ರೀಯ ಐಕ್ಯತೆಯ ಸ್ಪೂರ್ತಿಯ ಸೆಲೆಯಾಗಿ ರಾಷ್ಟ್ರೀಯ ನಾಯಕರು ಅದನ್ನು ಬಳಸಿಕೊಂಡಿದ್ದಾರೆ ಎಂಬ ಗೀತಾ ಸಮರ್ಥಕರ ವಾದವು ಸತ್ಯಕ್ಕೆ ದೂರವಾದುದು ಮತ್ತು ಅಂತಹವರು ರಾಷ್ಟೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿದ್ದ ಕುವೆಂಪು, ರವಿಂದ್ರನಾಥ್ ಠಾಗೂರ್ ಮತ್ತಿತರ ಪ್ರಗತಿಪರರ ಕೃತಿಗಳನ್ನು ಮನನ ಮಾಡದಿರುವುದು ವಿಷಾದನೀಯ.

ಲೋಕಮಾನ್ಯ ತಿಲಕರ ಗೀತಾ ರಹಸ್ಯವೆಂಬ ಉತ್ಕೃಷ್ಟ ಕೃತಿಯು ಗೀತೆಯ ಭೋಧನೆಗಿಂತ ಭಿನ್ನವಾದ ರಾಷ್ಟ್ರೀಯ ಪರಿಕಲ್ಪನೆಯದ್ದಾಗಿದೆ. ಮಹತ್ಮಾಗಾಂಧಿಯವರು ಸ್ವಾತಂತ್ರ್ಯ ಮತ್ತು ಸಮಾನತೆಯ ಹಾಗೂ ಪ್ರತ್ಯೇಕವಾಗಿ ಚಾತುರ್ವಣ್ಯದ ಅಸ್ಪೃಶ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು.  ಇಂದು  ನಮ್ಮ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ  ಸಾರ್ವಜನಿಕ ಭಾವೈಕ್ಯ ಸಾಧನೆ ಮುಖ್ಯವೇ ಹೊರತು ಭಗವತ್ ಗೀತೆಯನ್ನು ಭೋಧಿಸುವಂಥಾ ಪ್ರತ್ಯೇಕತಾವಾದವು ಅಪಾಯಕಾರಿಯಾಗಿದೆ. ಭಗವತ್ ಗೀತೆ ಮಾತ್ರವಲ್ಲ ಇತರ ಎಲ್ಲ ಧರ್ಮ ಗ್ರಂಥಗಳು ಸಹಾ ವೈಜ್ಞಾನಿಕ ವೈಚಾರಿಕತೆಗೆ ಮತ್ತು ಬೆಳವಣಿಗೆಗೆ ಸಲ್ಲದ ಅಂಶಗಳನ್ನೊಳಗೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಬೇಕಾಗುತ್ತದೆ.

ಒಟ್ಟಿನಲ್ಲಿ ಇದು ಸ್ವಾತಂತ್ರ್ಯ ಅಪಹರಣದ, ವರ್ಣಭೇಧ, ಜಾತಿಭೇಧ, ಇತ್ಯಾದಿಗಳನ್ನು ಪ್ರತಿಪಾದಿಸುವ ಭಾಷೆಯನ್ನುಳ್ಳ, ಸಾಹಿತ್ಯದ ಮೆರಗನ್ನು ನೀಡಲ್ಪಟ್ತಿರುವ ವಿಷ ಲೇಪಿತ ಮಾತ್ರೆಯಾಗಿದೆ. ಇಂತಹ ಭಗವತ್ ಗೀತೆಯನ್ನು ಶಾಲಾಮಕ್ಕಳಿಗೆ ಬೋಧಿಸುವ ಪ್ರಯತ್ನವನ್ನು ದೇಶಪ್ರೇಮಿಗಳು, ಸಮಾನತೆ ಸೌಹಾರ್ದತೆ ಬಯಸುವ ಎಲ್ಲರೂ ವಿರೋಧಿಸಬೇಕು. ನಮ್ಮದು ಜನತಾಂತ್ರಿಕ ಜಾತ್ಯಾತೀತ ಆಡಳಿತೆಯ  ಸಂವಿಧಾನಬದ್ಧ ಪ್ರಭುತ್ವವುಳ್ಳ ದೇಶವಾಗಿದ್ದು, ನಮ್ಮ ಸಂವಿಧಾನದ ಪರಿಪಾಲನೆಯನ್ನು ಅನುಲ್ಲಂಘನೀಯ ನಿಯಮವನ್ನಾಗಿ ಅಂಗೀಕರಿಸಿದೆ. ಇಲ್ಲಿ ರಾಷ್ಟ್ರೀಯ ಐಕ್ಯತೆ ಉಳಿಯಬೇಕಾದರೆ ಧರ್ಮ ಬೋಧನೆ, ಧರ್ಮಾಚರಣೆಗಳನ್ನು ಸಾರ್ವಜನಿಕ ಜೀವನದಿಂದ ಮುಕ್ತಗೊಳಿಸಬೇಕಾಗಿದೆ ಮತ್ತು ವಿದ್ಯಾಲಯಗಳು, ಆರೋಗ್ಯ ಮತ್ತಿತರ ಸಾರ್ವಜನಿಕ ಸೇವಾ ಸಂಸ್ಥೆಗಳು ಎಲ್ಲವೂ ಸಂವಿಧಾನ ಬದ್ಧವಾಗಿ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಲೇಬೇಕಾಗಿದೆ.

ವಾರ್ತಾಭಾರತಿ

ಕಮ್ಯುನಿಸಂ ಅನಿ ಪ್ರಜಾಪ್ರಭುತ್ವ್

ನಿರೂಪಣ್: ಮೈಕಲ್ ಡಿ ಸೋಜ, ಅಶೋಕನಗರ

ಮಾ|| ಬಿವಿ ಕಕ್ಕಿಲಾಯ ಭಾರತಚ್ಯಾ ಸ್ವಾತಂತ್ರ್ ಚಳುವಳಿಂತ್, ರೈತಾಂಕ್ ಆನಿ ಕಾಮೆಲಿಂಕ್ ಏಕ್ವೊಟಾವ್ನ್ ತಾಂಚೆ ಖಾತಿರ್ ೭೦ ವರ್ಸಾಂ ಸಕ್ರಿಯ್ ಜಾವ್ನ್ ಹೆಳ್`ಲ್ಲೊ ಕಮ್ಯುನಿಸ್ತ್ ಮುಖೆಲಿ. ತೊ ಸೈಂಟ್ ಎಲೋಸಿಯಸ್ ಕಾಲೇಜಿಂತ್ ೧೯೪೦ ಇಸ್ವಂತ್ ಶಿಕ್ಪಾವೆಳಿಂಚ್ ಕಮ್ಯುನಿಸ್ತ್ ಪಾಡ್ತಿಚೊ ಸದಸ್ಯ್ ಜಾವ್ನ್ ಭಾರತಚಾ ಸ್ವಾತಂತ್ರ್ ಚಳುವಳಿಂತ್ ಭಾಗ್ ಘೆವ್ನ್ ಜೈಲ್ ಶಿಕ್ಷೆಕ್ ಒಳಗ್ ಜಲ್ಲೊ. ಉಪ್ರಾಂತ್ ರಾಜ್ಯಸಭೆಚೊ ಅನಿ ಶಾಸಕ್ ಸಭೆಚೊ ಸದಸ್ಯ್ ಜಾವ್ನ್ ವಿಂಚೊವ್ನ್ ಲೋಕ ಮೊಗಾಳ್ ಮುಖೆಲಿ ತೊ ಜಾವ್ನ್ ಆಸ್`ಲ್ಲೊ. ಕಮ್ಯುನಿಸಂ ರಾಷ್ಟ್ರಾಂಕ್ ತಾಣೆಂ ಭೆಟ್ ದಿಲ್ಯಾ ಅನಿಂ ಸಬಾರ್ ಬೂಕ್ ತಾಣೆ ಬರೈಲ್ಯಾತ್. ಕಮ್ಯುನಿಸಂ ವಿಶಾಂತ್ ವಿಚಾರ್`ಲ್ಲ್ಯಾ ಥೊಡ್ಯಾ ಸವಾಲಾಂಕ್  ತಾಣೆ ದಿಲ್ಲೊ ಸಂಕ್ಷಿಪ್ತ್  ವಿವರ್:

1) ಕಮ್ಯುನಿಸಂ ಮ್ಹಳ್ಯಾರ್ ಕಿತೆಂ?

ಕಮ್ಯುನಿಸಂ ಏಕ್ ವೈಜ್ಞಾನಿಕ್ ಕಾಲ್ಪಾನಿಕ್ ಸ್ಥಿತ್. ತಿ ಖಂಚ್ಯಾಯಿ ರಾಷ್ಟ್ರಾಂತ್ ಎದೊಳ್ ನಿರ್ಮಾಣ್ ಜಾಂವ್ಕ್ ನಾ. ಕಮ್ಯೂನಿಸ್ಟ್ ಆಡಳಿತ  ಆಸ್`ಲ್ಲ್ಯಾ  ರಾಷ್ಟ್ರಾಂನಿ ತಿ ನಿರ್ಮಾಣ್ ಕರುಂಕ್ ಪ್ರಯತ್ನ್ ಕರಿತ್ತ್ ಆಸಾತ್. ತಾಕಾ ಅಮಿ ಆಶೆಂವ್ಚಾ ಆಮ್ಚಾ ಸರ್ಗಾಚಾ ಕಾಲ್ಪಾನಿಕ್ ಸ್ಥಿತ್ಯೆಕ್ ಸರಿ ಕರ್ಯೆತ್. ಕೊಣಾಂಕೀ ಕಿತೆಂಚ್ ಉಣೆಂಪಣ್ ನಾಸ್ತಾನಾ ಸಂಪೂರ್ಣ್ ಸಂತೊಸಾನ್ ಸಕ್ಕಡ್ ಲೋಕ್ ಜಿಯೆತೊಲೊ. ಕೋಣ್ ಕಿತೆಂ ಅಪೇಕ್ಶಿತಾ ತೆಂ ತಾಕಾ ಮೆಳ್ತೆಲೆಂ. ಎಕ್ಲೊ ಸಕ್ಡಾಂಕ್ ಆನಿ ಸಕ್ಕಡ್ ಎಕ್ಲ್ಯಾಕ್ ಮ್ಹಳ್ಳ್ಯಾ ನಿತೀನ್ ಸಾಮಾಜಿಕ್ ವೆವಸ್ಥಾ  ಆಸ್ತೆಲಿ. ಭೇದ್ ಭಾವ್ ಖಂಚ್ಯಾಚ್ ರೂಪಾರ್ ಆಸ್ಚೊ ನಾಂ. ಉತ್ಪನ್ನೆಚೊ ಸಗ್ಳೊ ವಾಂಟೊ ಮನ್ಶಾ ಕುಳಾಚ್ಯಾ ಅಭಿವೃದ್ಢೆಕ್ ವಿನಿಯೊಗ್ ಜಾತೊಲೊ. ಸೈನಿಕ್ ಸಮಾಜ್ ಸೇವಕ್ ಜಾವ್ನ್ ಲೋಕಾಕ್ ಕುಮಕ್ ಕರ್ತೆಲೆ.

ಹ್ಯಾವಿಶಿಂ ರಾಷ್ಟ್ರ್ ಕವಿ ಕುವೆಂಪುನ್ ದಿಲ್ಲೊ ವ್ಯಾಖ್ಯಾನ್ ಅಸೊ ಕೋಚೋವ್ನ್, ವೋಂಪೋವ್ನ್, ಪಾಲನ್ ಕರಿನಾಶೆಂ ಬೆಳೆಂ ಲುವೊಂಕ್ ಏನಾ. ಘಾಮ್ ಪೀಳಿನಾಶೆಂ ದುಡು ಹಾತಿಂ ಸೆರ್‍ವಾನಾ. ಶಿಕ್ಪ್ಯಾಂಚ್ಯಾ ಲೋಕಾಂತ್ ಧನಿ ಜಾಂವ್ಕ್ ಚಲಿಸ್ ಉಪಾವ್ ನಾ. ಥೈಂ ಕೊಣಾಂಕೀ ಮೋಸ್ ಕರ್ನ್ ದಿರ್ವೆಂ ಪುಂಜಾಂವ್ಕ್ ಜಾಯ್ನಾ. ತಾಚ್ಯಾ ಕಾಮಾ ತಕೀತ್ ಮಜೂರಿ. ಫಟ್ಕಿರಿ ರುಜ್ವಾತೆಕ್ ಆನಿ ಚೊರ್ಯಂ ಕರ್ತ್ಯುವ್ಯಾಂಕ್ ಆವ್ಕಾಸ್ ಆಸಾಚೊನಾ. ಕೊಣ್ಂಚ್ ದಲ್ಲಾಳಿಪಣ್ ಕರ್ನ್ ಗ್ರೆಸ್ತ್ ಜಾಂವ್ಚೊನಾ. ಥೈಂ ಎಕಾ ಥರಾಚೆಂ ವಿಶಿಷ್ಠ್ ಮ್ಹಣ್ ದಿಸ್ಲ್ಯಾರೀ ಸಮತಾವಾದಚೊ ಅಧಿಪತ್ಯ್; ಕಾಮೆಲಿಂಕ್ ಮಾತ್ರ್ ಥೈಂ ಪ್ರವೇಶ್ ಜಲ್ಯಾರೀ ಕೊಣೆಂಯೀ ಥೈಂ ವೊಚೊನ್ ಕಾಮ್ ಕರ್‍ಯೆತ್. ಪ್ರವೇಶ್ ಜಾಲ್ಯಾ ಉಪ್ರಾಂತ್ ತೊ ಥೈಂ ಚಕ್ರವರ್ತಿಚ್ಹ್ ಕಿತ್ಯಾಕ್ ತಾಚಾ ಶಿವಾಯಿ ದುಸ್ರಿಂ ಬಸ್ಕಾಂ ಯಾ ಜಾಗೋ ಆಸಾಚೊನಾ

2) ಕಮ್ಯುನಿಸಂಕ್ ಆನಿ ಸಮಾಜವಾದೆಕ್ ಕಿತೆಂ ವ್ಯತ್ಯಾಸ್?

ಸಮಾಜವಾದ್ ಕಮ್ಯುನಿಸಂಚೊ ಪಯ್ಲೊ ಭಾಗ್. ಸಮಾಜವಾದೆಂತ್ ಲೊಕಾ ಮದೆಂ ವರ್ಗ್ ಭೇದ್ ಸಂಪೂರ್ಣ್ ನಿವಾರಣ್ ಜಾಯ್ನಾ. ಪೂಣ್ ಭೇದ್  ಉಣೊ ಜಾತೊಲೊ.ಸಕ್ಡಾಂಕ್ ಕಾಮ್, ವಸ್ತಿ, ಶಿಕಾಪ್ ಆನಿ ಪಿಡೆಸ್ತಾಂಕ್ ಉಚಿತ್ ಚಿಕಿತ್ಸಾ ಲಾಬ್ತೆಲಿ. ಹರ್‍ಯೆಕ್ಲೊ ತಾಚ್ಯಾ ತಾಂಕಿ ಪರ್ಮಾಣೆ ಕಾಮ್ ಕರ್ನ್ ತಾಚ್ಯಾ ಕಾಮಾ ಪರ್ಮಾಣೆ ಪ್ರತಿಫಳ್ ಘೆತೊಲೊ. ಸಮಾಜೆಚೊ ಉತ್ಪನ್ನ್ ಆನಿ ವಿನಿಯೋಗ್ ಯೋಜನಾಭರಿತ್ ಆಸೊನ್ ಸಾರ್ವಜನಿಕ್ ಸವಲತ್ತೆ ಖಾತಿರ್ ಚಡ್ ಪ್ರಾಮುಖ್ಯತ ದಿತೆಲೆ.  ಹಿ ವ್ಯವಸ್ಥಾ ಮುಂದರ್ಸುನ್ ನಿಮಾಣ್ಯ್ ಘಟ್ಟಾಕ್ ಕಮ್ಯುನಿಸಂ ಮ್ಹಣ್ತಾತ್.

3) ಕಮ್ಯುನಿಸಂತ್ ಪ್ರಜಾಪ್ರಭುತ್ವ್ ನಾಂ ಮ್ಹಣ್ತಾತ್ ನೀಜ್ ಗೀ?

ಕಮ್ಯುನಿಸಂ ವ್ಯವಸ್ಥೆಂತ್ ಭಂಡವಾಳ್ ಶಾಹಿ  ರೂಪಾಚಿ ಮಣ್ಜೆ ಆತಾಂಚಿ ಆಮ್ಚಿ ಆರ್ಥಿಕ್, ಸಾಮಾಜಿಕ್ ಆಡಳಿತೆಚಿ ರೀತ್ ಬದ್ಲುನ್  ವರ್ಗ್ ಭೇದ್ ನಾತ್`ಲ್ಲೊ ಸರ್ವ್ ಕಾಮೆಲಿಂಕ್ ಸಂಪೂರ್ಣ್ ರಿತಿನ್ ಆವ್ಕಾಸ್ ಲಾಬೊವ್ನ್ ಆಡಳಿತಾಂತ್ ತಾಣಿಂ ಪಾತ್ರ್ ಘೆಂವ್ಕ್ ವಾಟ್ ಕರ್ನ್ ದಿವ್ಚೊಂ ಮುಖ್ಯ ಶೆವೊಟ್ ಜಾವ್ನಾಸಾ. ಹೆಂ ಸಕ್ಕಡ್ ಕಮ್ಯುನಿಸ್ತ್ ರಾಷ್ಟ್ರಾಂನಿ  ಎಕ್ ಚ್ಹ್ ರಿತಿನ್ ಜಾಯ್ಜೆ ಯಾ ಜಾತಾ ಮ್ಹಣ್ ನಾಂ. ವಿವಿಂಗಡ್ ರಾಷ್ಟ್ರಾಂತ್ ತಾಂಚ್ಯಾ ಪರಿಗತಿಕ್ ಸರಿ ಜಾವ್ನ್ ತಾಂಚಿಚ್ಹ್ ರೀತ್ ವಾಪಾರ್ತಾಲೆ.  ಪೂಣ್ ತಿ ರೀತ್ ಸಂಪೂರ್ಣ್ ಥರಾನ್  ಲೋಕಾ ಥಾವ್ನ್ ಚುನಾಯಿತ್ ಜಾವ್ನ್ ಪ್ರಜಾಪ್ರಭುತ್ವಚಿ ಜಾವ್ನಾಸ್ತೆಲಿ. ಸಕ್ಡಾಂಕ್ ಮತದಾನೆಚೊ ಹಕ್ಕ್ ಆಸೊನ್ ಚುನಾಯಿತ್ ಪ್ರತಿನಿಧಿ ಸಾರ್ಕೊ ಮನಿಸ್ ನೈ ಮ್ಹಣ್ ದಿಸಾತ್ ತರ್ ತಾಕಾ ಉಚ್ಹಾಟನ್ ಕರ್ಚೆಂ ಹಕ್ಕ್`ಯೀ ಲೋಕಾಕ್ ಆಸ್ತೆಲೆಂ. ಲೊಕಾ ಥಾವ್ನ್, ಲೊಕಾ ಕಾಥಿರ್, ಆನಿ ಲೊಕಾನ್`ಚ್ಹ್  ಚುನಾಯಿತ್ ಕರ್ಚೆಂ ನೀಜ್ ಪ್ರಜಾಪ್ರಭುತ್ವ್ ತೆಂ ಜಾವ್ನಾಸ್ತೆಲೆಂ. ಪ್ರಜಾಪ್ರಭುತ್ವಚೊ ನೀಜ್ ಶೆವೊಟ್ ಮಣ್ಜೆ ಪ್ರಜೆ [ನಾಗರಿಕ್] ನೀಜ್ ಅರ್ಥಾನ್ ಪ್ರಭು ಜಾಂವ್ಕ್ ಪೌತೊಲೊ. ನೈ ಆತಾಂಚ್ಯಾ ಆಮ್ಚ್ಯಾ ರಿತಿಚೆ ಪರ್ಮಾಣೆ ಬಿರ್ಲಾಕ್ ಯೀ ಎಕ್`ಚ್ಹ್ ಓಟ್, ಕಾರ್ಮಿಲಾಕೀ ಎಕ್`ಚ್ಹ್ ಓಟ್ ಕಿತ್ಲೆಂ ಸಮಾನತ್! ಪೂಣ್ ಬಿರ್ಲಾ ಕೆದಿಂಕ್`ಚ್ಹ್ ಸಲ್ವಚೊನಾ ! ಮುಖ್ಯಜಾವ್ನ್.

4) ಕಮ್ಯುನಿಸಂ ದೇವ್ ಪಾತ್ಯೆಣಿಂಚ್ಯಾ ಲೋಕಾಚ್ಯಾ ವಿರೋದ್ ಮ್ಹಣ್ತಾತ್, ಹೆಂ ನೀಜ್ ಗೀ ?

ಕಮ್ಯುನಿಸಂ ಏಕ್ ವೈಜ್ಞಾನಿಕ್ ಸಿದ್ದಾಂತ್. ತಾಂತುನ್ ಖಂಚಾಚ್ಹ್ ರಿತಿನ್, ಖಂಚ್ಯಾಯಿ ಧರ್ಮಾಂಚ್ಯಾ ವಿಸ್ವಾಸಾಕ್ ನಿಷೇದ್ ಯಾ ಧಮನ್ ಕರ್ಚೊ ಪ್ರಸ್ತಾಪ್ ನಾಂ. ಕಮ್ಯುನಿಸ್ತ್ ಆಡಳಿತಾ ಆಸ್ಚಾ ಖಂಚ್ಯಾ ರಾಷ್ಟ್ರಾತ್`ಯೀ ತಸೆಂ ಕೆಲ್ಲೆಂ ದೃಷ್ಟಾಂತ್ ನಾಂತ್, ಎಕ್`ಚ್ಹ್ ಏಕ್  ಇಗರ್ಜ್, ಮಂದಿರ್ ಯಾ ಪಳ್ಳಿ ನಾಸ್ ಕೆಲ್ಲೊ ಧಾಖ್ಲೊ ನಾ. ಸುಮಾರ್ 3 ದಶಕಾಂ ಆದಿಂ ರಷ್ಯಾಂತ್ ಜಾಗತಿಕ್ ಕ್ರಿಶ್ಚನ್ ಸಮ್ಮೇಳನ್ ಸಲ್`ಲ್ಲೆಂ. ಭಾರತಾಂತ್ಲೆ ಪ್ರತಿನಿಧಿಯೀ ತಾಕಾ ಹಾಜಾರ್ ಜಾಲ್ಲೆ. ಥೋಡೆ ಜಣ್ ಸಾಂಗಾತಾ ಮೆಳೊನ್ ಸ್ವ ಸಹಾಯ ಸಂಸ್ಥೊ ಘಡ್ನ್ ಸರ್ಕಾರಾಕ್ ಅರ್ಜಿ ದಿಲ್ಯಾರ್ ತಾಂಕಾಂ ದೇವ್ ಮಂದಿರ್ ಬಾಂದುಂಕ್ ಜಾಗೊ ಆನಿ ಖರ್ಚಾಕ್ ಗ್ರಾಂಟ್ ರುಪಾರ್ ದುಡ್ವಾಚಿ  ಕುಮಕ್ ಕರ್ಚಿ ವ್ಯವಾಸ್ಥಾಯೀ ಥೈಂ ಆಸಾ. ವಿಭಿನ್ನ್  ದೇವ್ ಪಾತ್ಯೆಣೆಚ್ಯಾ ಲೋಕಾಕ್ ತಾಂಚ್ಯಾ ಪಾತ್ಯೆಣೆ ಪರ್ಮಾಣೆ ದೈವಿಕ್ ಕಾರ್ಯಿಂ ಅಚರ್ಸುಂಚೆಂ ಸ್ವಾತಂತ್ರ್ ಆಸಾಂ.

ಕ್ಯೂಬಾ ಏಕ್ ಕಮ್ಯುನಿಸ್ತ್ ಆಡಳಿತ ಆಸ್ಚೆಂ ರಾಷ್ಟ್ ಥೈಂಚೊ ಲೋಕ್ ಬಹು ಸಂಖ್ಯಾತ್ ಕ್ರಿಸ್ತಾಂವ್. ತಾಂಚ್ಯಾ ಭಕ್ತಿಕ್ ಕಾರ್ಯಾಂಕ್ ಆನಿ ತಾಂಚ್ಯಾ ಪಾತ್ಯೆಣೆಂಕ್ ಕಸಲಿಚ್ಹ್ ಅಡ್ಕಳ್ ಜಾಲ್ಲಿ ನಾ. ಜಾತಿಚೊ ಸಂಘರ್ಷ್ ಆನಿ ಧರ್ಮ್ ಏಕ್ ವ್ಯಾಪಾರಕ್ ವಾಪಾರುಂಕ್  ಆವ್ಕಾಸ್ ಅಸ್ಚೊನಾ. ಜೆಜು ಕ್ರಿಸ್ತಾನ್ ದೇವಾಳಾಂತ್ಲ್ಯಾ ವ್ಯಾಪಾರಿಸ್ತಾಂಕ್ ದಾಂವ್ಡಾಯಿಲ್ಲೆಂ ಉಡಾಚ್ ಕರಾ. ಆತಾಂ ಆಮ್ಚಾ ರಾಷ್ಟ್ರಾಂತ್  ವಿಭಿನ್ನ್  ದೇವ್ ಪಾತ್ಯೆಣೆಚ್ಯಾ ಲೋಕಾಕ್ ಕಿತ್ಲೆಂ ರಕ್ಷಣ್ ಆಸಾಂ? ಕಿತ್ಲ್ಯೊ ಇಗರ್ಜ್ಯೊ ಅನಿ ಪಳ್ಳ್ಯೊ  ಫಢುಂಕ್ ನಾಂತ್?  ಕೋಮು ಗಲಾಟೊ, ಧಂಗೆ ಜಾವ್ನ್ ಕಿತ್ಲೆ  ಜೀವ್  ನಾಸ್ ಜಾಂವ್ಕ್ ನಾಂತ್? ಅಸೆಂ ಬಿಲ್ಕುಲ್ ಕಮ್ಯುನಿಸ್ತ್ ರಾಷ್ಟ್ರಾಂನಿ   ಜಾಂವ್ಕ್ ಆವ್ಕಾಸ್ ಆಸ್ಚೊನಾ.

5) ಕಮ್ಯುನಿಸ್ತ್ ಆಡಳಿತ್ ವ್ಯವಸ್ಥೆ ಆತಾಂಚ್ಯಾ ಆಮ್ಚಾ ವ್ಯವಸ್ಥೆ ವರ್ನಿ ಕಶಿ ವಿಂಗಡ್?

ಕಮ್ಯುನಿಸ್ತ್ ಆಡಳಿತ ಮ್ಹಳ್ಯಾರ್ ಸೈನಿಕ್ ಆಡಳಿತ್ ಯಾ ಸರ್ವಾಧಿಕಾರಿ ಥರಾಚಿ ಆಡಳಿತ  ನೈ. ಕಮ್ಯುನಿಸ್ತ್ ಪಾಡ್ತಿಕ್ ಚುನಾವಣೆಂತ್ ಬಹುಮತ್ ಮಳೊನ್ ಅದಿಕಾರಾಕ್ ಏತ್ ಜಲ್ಲ್ಯಾರ್  ಲೋಕಾಚ್ಯಾ ಮೂಳ್ ಬೂತ್ ಹಾಕ್ಕಾಂಕ್, ಆನಿ ಸೌಕರ್ಯಾಂಕ್,  ತಾಂಚ್ಯಾ ಆರ್ಥಿಕ್ ಆನಿ ಸಾಮಾಜಿಕ್ ಸಮಾನತೆಕ್ ಗರ್ಜೆಚಿಂ ಕಾನುನಾಂ ರಚುನ್ ತಿಂ ಜಾರಿ ಕರ್ತೆಲೆ. ಆಡಳಿತ ಚುರುಕ್ ಆನಿ ಪಾರದರ್ಶಕ್ ಜಾಂವ್ಕ್ ಲೋಕಾ ಥಾಂವ್ನ್ ಚುನಾಯಿತ್ ಕೆಲ್ಲೆ ಸಂಘ್ ಸಂಸ್ಥೆ ತಾಂಚಿ ಉಸ್ತುವಾರಿ ಪಳೆತಾಲೆ. ಅಧಿಕಾರ್ ವಿಭಾಜಿತ್ ಕರ್ನ್ ತ್ಯಾ ಸಂಸ್ಥ್ಯಾಂಕ್ ಅಧಿಕ್ ಅಧಿಕಾರ್ ಲಾಬ್ತೊಲೊ. ಆತಾಂಚ್ಯಾ ಆಮ್ಚ್ಯಾ ಲೊಕಸಭಾ ಚುನಾಯಿತ್ ಕಮ್ಯುನಿಸ್ತ್ ಪಾಡ್ತಿಚೆ ಮಾತ್ರ್ ನೈಂ ಆಸ್ತಾಂ ಇತರ್  ಸಕ್ಕಡ್ ಪಾಡ್ತಿಚೆ   ಬಹು ಸಂಖ್ಯಾತ್  ಸದಸ್ಯ್  ಕರೋಡ್ ಪತಿ ಜಾವ್ನಾಸಾತ್, ದೇಶ್ಯಾಚೊ  80 ಕೊರೊಡ್ ಲೋಕ್ 20 ರುಪ್ಯಾಂ ವರ್ನಿ ಉಣ್ಯಾ ಜೋಡಿರ್ ದುಬ್ಲ್ಯಾಪಣಾರ್  ಜೀಯೆತಾ, ಅನಿ ತ್ಯಾಚ್ ವೆಳಾರ್ ಸಂಸಾರಾತ್ಲ್ಯಾ ಅತ್ಯಂತ್ ಗ್ರೆಸ್ತ್ 10 ಜಣಾಂ ಪಯ್ಕಿ 4 ಜಣ್ ಅಮ್ಚಾ ದೇಶಾಂತ್ಲೆ   ಮ್ಹಣ್ ಸರ್ಕಾರಿ ಅಧಿಕೃತ್ ವರ್ದಿ ತಿಳ್ಸಿತಾ.  ಅಶೆಂ ಬಹು ಸಂಖ್ಯಾಚಾ ದುಬ್ಲ್ಯಾ ಲೋಕಾಚೆ  ಥೊಡೆಚ್ಹ್  ಪ್ರತಿನಿಧಿ ಲೋಕಸಭೆಂತ್ ಅಲ್ಪ ಸಂಖ್ಯಾಚೆ ಜಾವ್ನ್ ತೆ  ಕಾಯಿಂಚ್ ಕರುಂಕ್ ಸಕಾನಾಂತ್. ಆನಿ ಕೊರೊಡ್ಪತಿ ಉಮೇದ್ವಾರಿಂ ಮುಕಾರ್ ಚುನಾವಣೆಂತ್ ಗರೀಬ್ ಲೋಕಾಕ್ ಜಿಕೊಂವ್ಕ್ ಅಸಾಧ್ಯ್. ಅತಾಂ ಅಮಿಂ ಪಾಳ್ಚೆಂ ಅಮ್ಚೆಂ ಪ್ರಜಾಪ್ರಭುತ್ವ್ ಶ್ರೇಶ್ಠ್, ಬಲಿಷ್ಠ್ ಆನಿ ಕಿತೆಂ ಅಶೆಂ ತಶೆಂ ಮ್ಹ`ಣ್ ಗಾಜ್ತಾತ್. ಪೂಣ್ ಬಹು ಸಂಖ್ಯಾತ್ ಪ್ರಜಾ ಕಸಿ ಜಿಯೆತಾ? ಪ್ರಜೆ ಪ್ರಭು ಜಾಂವ್ಕ್ ಸಕ್ತಾ? ತರ್ ಕಸಲೆಂ ಪ್ರಜಾಪ್ರಭ್`ತ್ವ್ ಹೆಂ?ಸರ್ಕಾರ್ ಗ್ರೆಸ್ತ್ ಲೋಕಾಕ್ ಪಸಂದ್ ಜಾಂವ್ಚೊ ಕಾನೂನ್ ಘಡ್ನ್ ತಾಂಕಾ ಜಾಯಿ ಜಾಂವ್ಚಿ ಸವಲತ್ತ್ ಚಡ್ ಕರಿತ್ತ್ ವೆತಾ. ಹಿ ಆಮ್ಚಾ ದೇಶಾಚಿ ಧಾರೂಣ್ ಸ್ಥಿಥಿ.

6) ಸೋವಿಯತ್ ಯೂನಿಯಾನಾಂತ್ ಕಮ್ಯುನಿಸಂ ಸಲ್ವಂಕ್ ಕಾರಾಣ್ ಕಿತೆಂ?

ವಯ್ರ್ ತಿಳ್ಸಿಲ್ಯ್ಯಾ ಪ್ರಕಾರ್ ಥೈಂ ಕಮ್ಯುನಿಸಂ ಜಾರಿ ಜಾವ್ಕ್ ನಾತ್`ಲ್ಲೆಂ.  ಸಮಾಜವಾದಿ ವ್ಯವಸ್ತಾ ಮಾತ್ರ್ ರಚನ್ ಜಾಲ್ಲಿ ಥೊಡ್ಯಾಚ್ಹ್ ವರ್ಸಾನಿಂ ಅದ್ಭುತ್ ಪ್ರಗತಿ ಅನಿ ಯಶಸ್ವಿ ಲಾಬ್`ಲ್ಲಿ ತರೀ ಥೈಂಚಾ ಲೋಕಾಕ್ ತ್ಯಾ ಯಶಸ್ವಿಚೊ ಫಾಯ್ದೊ ಸಂಪೂರ್ಣ್ ಲಾಭ್ಹೊಂಕ್ನಾ. ಅಂತರಾಷ್ಟ್ರೀಯ್ ಶೀತಲ್ ಝುಜ್, ಸಾಮ್ರಾಜ್ಯವಾದಿ ರಾಷ್ಟ್ರಾಂಚೆಂ ಆರ್ಥಿಕ್ ಧಿಗ್ಬಂದನ್, ಝುಜಾ ಸಾಹೆತಿಚೊ ಸ್ಪರ್ದೊ, ಹೆರ್ ರಾಷ್ಟ್ರಾಂಚ್ಯಾ ಸ್ವಾತಂತ್ರ್ಯ ಖಾತಿರ್ ಅನಿ ಸ್ವತಂತ್ರ್ ಜಲ್ಲ್ಯಾ ರಾಷ್ಟ್ರಾಂಕ್ ಆರ್ಥಿಕ್ ಮಜತ್ ದಾರಾಳ್ ಮಾಪಾನ್ ತಾಣಿಂ ದಿಲ್ಲಿ. ದೃಷ್ಟಾಂತಕ್ ಭಾರತ್, ಚೀನಾ, ಕ್ಯುಬಾ, ವಿಯೆಟ್ನಾಂ, ಅಫಘಾನಿಸ್ಥಾನ್, ಲಾಟಿನ್ ಅಮೆರಿಕಾ, ಬೆಲ್ಜಿಯಂ, ಕಾಂಗೊ,ದ.ಆಪ್ರಿಕಾ.  ಇತ್ಯಾದಿ.

ಪ್ರಗತೆಚೊ ವೊಡ್ ವಾಂಟೊ ಇತರ್ ರಾಷ್ಟ್ರಾಂಚ್ಯಾ ಮಜತೆಕ್ ಆನಿ ರಕ್ಷಣೆಂಕ್ ವಿನಿಯೋಗ್ ಜಾಲ್ಲ್ಯಾನ್ ಥೈಂಚೊ ಲೋಕ್ ನಿರಾಸಿ ಜಾಲೊ. ತ್ಯಾ ಭಾಯ್ರ್ ಸಮಾಜವಾದಿ ವ್ಯವಾಸ್ಥೆಂತ್ ಅಂತರಾಷ್ಟ್ರೀಯ್ ಭಿನ್ನಾಭಿಪ್ರಾಯ್ ಉಬ್ಜೊವ್ನ್ ಸಮಾಜವಾದಿ ರಾಷ್ಟ್ರಾಂನಿಂ ವ್ಯತಿರಿಕ್ತ್ ಪರಿಣಾಮ್ ಘಡ್ಲೊ.  ಭಂಡವಾಳಿಶಾಹಿ ರಾಷ್ಟ್ರಾಂ ಕಮ್ಯುನಿಸಂ ಅನಿ ಸಮಾಜವಾದೆಚ್ಯಾ ಸಲ್ವಣೆಕ್ ನಿರಂತರ್ ವಾವುರ್ತಾತ್. ರಾಷ್ಟ್ರಾಂ ಮದೆಂಗಾತ್ ಝಗ್ಡೆಂ ಉಬ್ಜೈತಾತ್. ಅಸೆಂ ಸಾಮ್ರಾಜ್ಯವಾದಿ ಅನಿ ಭಂಡವಾಳಿಶಾಹಿ ರಾಷ್ಟ್ರಾಂಚ್ಯಾ  ಅಡ್ಕಳಿ ಅನಿ ವಿರೋದಿ ನಿಮ್ತಿ ಥೈಂ ಆಡಳಿತಾಕ್ ಸಲ್ವಣಿ ಜಾಲಿ. ಜಲ್ಯಾರ್ ಹಿ ಕಮ್ಯುನಿಸಂ ಅನಿ ಸಮಾಜವಾದೆಚಿ ಸಲ್ವಣಿ ನೈಂ. ಬಗಾರ್ ತಿ ಜಾರಿ ಕೆಲ್ಲ್ಯಾ ಅನನುಭವಿ ಮುಖೆಲಿನಿಂ ಜಾರಿ ಕೆಲ್ಲ್ಯಾ ರಿತಿಚಿ ಸಲ್ವಣಿ. ಸಲ್ವಣೆಂಚೆಂ ಕಾರಾಣ್ ಸಮ್ಜೊನ್ ಸರ್ವ್ ಮನ್ಶಾಕುಳಾಚ್ಯಾ ಅಭಿವೃದ್ದಿಕ್ ತಿ ಜಾರಿ ಜಾಂವ್ಕ್ ನಿರಂತರ್ ಪ್ರಯತ್ನ್ ಕರ್ಚೆಂ  ಗರ್ಜೆಚೆಂ.

7) ಆಮ್ಚಿ ಸಂಸ್ಕೃತಿ  ಅತ್ಯಂತ್  ಶ್ರೇಷ್ಠ್ ಅನಿ ಆದರ್ಶ್ ಮ್ಹಣ್ತಾತ್, ತುಜಿ ಅಭಿಪ್ರಾಯಿ ಕಿತೆಂ ?

ಸಂಸ್ಕೃತಿ ಮ್ಹಳ್ಯಾರ್ ಲೋಕಾನ್ ಜಿಯೆಂವ್ಚಿ ರೀತ್. ಆಮಿಂ ಕಿತೆಂ ಆತಾಂ ಭಾರತ್ ಮ್ಹಣ್ತಾಂವ್ ತಾಂತ್ಲೊ ಲೋಕ್ ಸಭಾರ್ ಕಾಳಾ ಆದಿಂ ಸಕ್ಕಡ್ ಸಾಂಗಾತಾ ಮೆಳೊನ್ ಉತ್ಪಾದನ್ ಅನಿ ಸಂರಕ್ಷಣ್  ಕರ್ನ್ ಜಿಯೆಂವ್ಚಿ ವ್ಯವಾಸ್ಥಾ ಆಸ್`ಲ್ಲಿ ಮ್ಹಣ್ ಚರಿತ್ರೆಂತ್ ಧಾಖ್ಲೆ ಆಸಾತ್. ಹಿ ವ್ಯವಾಸ್ಥಾ ಸುಮಾರ್ 5 ಹಜಾರ್ ವೊರ್ಸಾಂ ಆದಿಂಚ್ ಬದ್ಲೊನ್ ವರ್ಗ್ ಆಧಾರಿತ್ ಚಾತುರ್ವರ್ಣೀಯ ಧರ್ಮ ಮ್ಹಳ್ಳಿ ವ್ಯವಸ್ತಾ ಉಬ್ಜಾಲಿ.  ಊಂಚ್, ನೀಚ್, ಸ್ಪರ್ಶ್, ಅಸ್ಪರ್ಶ್, ಸೇವಕ್, ಮಾಲಿಕ್ ಅಸಲೊ ವರ್ಗ್ ಭೇದ್ ಆಚರಣೆಕ್ ಆಯ್ಲೊ. ಜಲ್ಮಾನ್ಚ್ ಊಂಚ್, ನೀಚ್, ಸ್ಪರ್ಶ್, ಅಸ್ಪರ್ಶ್ ಮ್ಹಣ್ ಭೇದ್ ಕರ್ಚಿ ಸಂಸ್ಕೃತಿ ಬಾರತಾಂತ್ ಮಾತ್ರ್ ಪಳೆಂವ್ಕ್ ಮೆಳ್ತಾ.  ತಸಲಿ ಅನಿಷ್ಠ್, ಅವ್ಮಾನಿಕ್, ಅಮಾನವೀಯ್  ಸಂಸ್ಕೃತಿ ಶ್ರೇಷ್ಠ್ ಯಾ ಆದರ್ಶ್ ಮ್ಹಣ್ಯೆತ್?

ಲೋಕಪಾಲ್ ಚಳುವಳಿ ದಾರಿ ತಪ್ಪದಿರಲಿ

ಪ್ರಸ್ತಾವಿತ ಲೋಕಪಾಲ್ ಮಸೂದೆಯ ಬಗ್ಗೆ ಲೇಖನ (ದಿನಾಂಕ ಜುಲೈ 1, 2011)

[dropcap]ನ[/dropcap]ಮ್ಮ ದೇಶದಲ್ಲಿಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಅಣ್ಣಾ ಹಜಾರೆಯವರು ಈ ಪ್ರಶ್ನೆಯನ್ನು ಎತ್ತಿಕೊಂಡು ಅದನ್ನು ನಿಗ್ರಹಿಸಲು ಲೋಕಪಾಲ ಪ್ರಾಧಿಕಾರವೊಂದನ್ನು ಸ್ಥಾಪಿಸುವಂತೆ ಆಗ್ರಹಿಸುವ ಚಳುವಳಿಯನ್ನು ಸಂಘಟಿಸಿದರು ಮತ್ತು ಅದಕ್ಕೆ ವ್ಯಾಪಕ ಸಾರ್ವತ್ರಿಕ ಬೆಂಬಲವೂ ವ್ಯಕ್ತವಾಯಿತು. ಚಳುವಳಿಯ ಗಂಭೀರತೆಯನ್ನು ಕಂಡುಕೊಂಡ ಸರಕಾರವು ಹಜಾರೆಯವರೊಳಗೊಂಡು ಸರಕಾರಿ ಮತ್ತು ಗಣ್ಯ ನಾಗರಿಕರ  ಒಂದು ಸಮಿತಿಯನ್ನು ರಚಿಸಿತು ಮತ್ತು ಆ ಸಮಿತಿ ರಚಿಸಿದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಭರವಸೆಯನ್ನೂ ನೀಡಿತು. ಆದರೆ ಈಗ ಆ ಸಮಿತಿಯೊಳಗೆಯೇ ಮುಖ್ಯ ಪ್ರಶ್ನೆಗಳಿಗೆ ಒಮ್ಮತ ಮೂಡದೆ ಮಸೂದೆಯ ಉದ್ದೇಶವೇ ಮೂಲೆಗುಂಪಾಗುವಂತೆ ತೋರುತ್ತದೆ. ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ. ಅಲ್ಲದೆ ಅಣ್ಣಾ ಹಜಾರೆಯವರು ಸತ್ಯಾಗ್ರಹವನ್ನು ಪುನರಾರಂಭಿಸುವುದು ಖಚಿತವೆಂಬ ಹೇಳಿಕೆಯು ನಮ್ಮೆಲ್ಲರ ದುಗುಡಕ್ಕೆ ಕಾರಣವಾಗಿದೆ. ಹಜಾರೆಯವರು ಆ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದುದನ್ನು ನಾವು ಸ್ವಾಗತಿಸುತ್ತೇವೆ. ಎಡ ಪಕ್ಷಗಳು ಈಗಾಗಲೇ ಅವರಿಗೆ ಬೆಂಬಲವನ್ನು ಸೂಚಿಸಿವೆ.

ಅಣ್ಣಾ ಹಜಾರೆಯವರ ಹಿಂದಿನ ಚಳುವಳಿಯಲ್ಲಿ ರಾಂ ದೇವ್ ಎಂಬ ಯೋಗ ಗುರು ಎಂದುಕೊಳ್ಳುವ ವ್ಯಕ್ತಿಯು ನುಸುಳಿ ಚಳುವಳಿಯ ದಿಕ್ಕುತಪ್ಪಿಸುವ ಸಂಚನ್ನು ರೂಪಿಸಿದ್ದು ಬಹಿರಂಗವಾಯ್ತು. ಚಳುವಳಿಯಲ್ಲಿ ತಮಗೆ ಪ್ರಾಮುಖ್ಯತೆ ದೊರಕದ್ದುದನ್ನು ಕಂಡು ಅವರನ್ನು ಪ್ರಯೋಜಿಸಿದ ವಾಣಿಜ್ಯೋದ್ಯಮಿಗಳು ವಿದೇಶೀ ಬೇಂಕುಗಳಲ್ಲಿ ಜಮೆಯಾಗಿರುವ ಕಪ್ಪು ಹಣದ ವಿಷಯದ ಬಗ್ಗೆ ಪ್ರಾಮುಖ್ಯತೆ ಕೊಟ್ಟು ಅದನ್ನು ಮುಟ್ಟುಗೋಲು ಹಾಕಿ ವಶಪಡಿಸಬೇಕೆಂಬ ಬೇಡಿಕೆಯನ್ನಿಟ್ಟು ಬೇರೆಯೇ ಒಂದು ಚಳುವಳಿಯನ್ನು ಪ್ರಾರಂಭಿಸಿದರು. ಅದರ ಪ್ರಹಸನವನ್ನು ನಾವು ಕಂಡಿದ್ದೇವೆ. ರಾಮ ಲೀಲಾ ಮೈದಾನದಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಮಧ್ಯರಾತ್ರಿಯಲ್ಲಿ  ನಡೆಸಿದ  ಪೊಲೀಸ್ ಕಾರ್ಯಾಚರಣೆಯು ಖಂಡನೀಯವಾದರೂ, ಆ  ಚಳುವಳಿಯ ಹಿಂದೆ ರೂಪಿತವಾದ ವಿನಾಶಕಾರಿ ಸಂಚು ನಮ್ಮೆಲ್ಲರನ್ನು ದಂಗುಬಡಿಸಿತು. ಆ ಸಂದರ್ಭದಲ್ಲಿ ಅವರು ವರ್ತಿಸಿದ ರೀತಿ, ಹೆಣ್ಣುವೇಷದಲ್ಲಿ ಪಲಾಯನಗೈದ ಅವರ ಹೇಡಿತನ ಮತ್ತು ಅವರನ್ನು ಮುಂದಿರಿಸಿ ಚಳುವಳಿಯನ್ನು ರೂಪಿಸಿದ ವಾಣಿಜ್ಯೋದ್ಯಮಿಗಳ ಸಂಚು ಅತ್ಯಂತ ವಿನಾಶಕಾರಿಯಾಗಿತ್ತು. ರಾಷ್ಟ್ರವ್ಯಾಪಿ ಅರಾಜಕತೆಯನ್ನು ಉಂಟು ಮಾಡಿ ಅಧಿಕಾರವನ್ನು ಕಸಿದುಕೊಳ್ಳುವ ಹುನ್ನಾರ  ಅವರಲ್ಲಿ ಅಡಗಿದ್ದದ್ದು ಬಯಲಾಯ್ತು.

ಆದರೆ ರಾಂ ದೇವ್‌ರವರ ಪ್ರಹಸನಕ್ಕೂ ಹಜಾರೆಯವರ ಚಳುವಳಿಗೂ ಬಹಳ ವ್ಯತ್ಯಾಸವಿದೆ. ಅವರಿಬ್ಬರ ಚಳುವಳಿಗಳನ್ನು ತಳಕು ಹಾಕಕೂಡದು. ರಾಂ ದೇವ್‌ರವರು ವಾಣಿಜ್ಯೋದ್ಯಮಿಗಳ ಪ್ರತಿನಿಧಿಯಾದರೆ ಹಜಾರೆಯವರು  ಜನಸಾಮಾನ್ಯರ ಪ್ರತಿನಿಧಿಯಾಗಿರುತ್ತಾರೆ. ಲೋಕಪಾಲ್ ಮಸೂದೆಯ ಸಮಿತಿಯಲ್ಲಿನ ಮುಖ್ಯ ಭಿನ್ನಾಭಿಪ್ರಾಯವು ಲೋಕಪಾಲರ ನೇಮಕ, ಅವರಿಗೆ ನೀಡುವ ಅಧಿಕಾರ, ಮತ್ತು ಅವರ ನಿಯಂತ್ರಣದ ಬಗ್ಗೆ ಮತ್ತು ಅವರಿಗೆ ಈಗಿನ ಬೇಡಿಕೆಯಂತೆ ಅಧಿಕಾರ ನೀಡಿದರೆ  ಅವರು ಭಸ್ಮಾಸುರನಂತೆ ಅನಿಯಂತ್ರಿತರಾಗಿ ವಿನಾಶಕ್ಕೆ ದಾರಿಯಾದೀತು ಎಂಬ ಭೀತಿ ಕಾಡುವುದು ಸಹಜವಾಗಿದೆ. ಆದಕ್ಕೆ ನಾವು ಒಂದು ಸಲಹೆಯನ್ನು ಸೂಚಿಸಲು  ಬಯಸುತ್ತೇವೆ.

ಲೋಕಪಾಲ ಸಂಸ್ಥೆಯನ್ನು ಕೇಂದ್ರ ಮಂತ್ರಿ ಮಂಡಲ, {ಪ್ರಧಾನ ಮಂತ್ರಿ} ವಿರೋಧ ಪಕ್ಷದ ನಾಯಕ ಮತ್ತು  ಸರ್ವೋಚ್ಛ ನ್ಯಾಯಾಲಯದ ನ್ಯಾಯಾಂಗ ಪೀಠವು ಜೊತೆಗೂಡಿ ರೂಪಿಸತಕ್ಕದ್ದು ಮತ್ತು ಅವರನ್ನು ನೇಮಿಸುವ, ನಿಯಂತ್ರಿಸುವ ಮತ್ತು ಉಚ್ಛಾಟಿಸುವ  ಅಧಿಕಾರವೂ ಅವರಿಗೇ ಇರಬೇಕು ಮತ್ತು ಇದನ್ನು ರಾಷ್ಟ್ರಾಧ್ಯಕ್ಷರ ಮೂಲಕ ಕಾರ್ಯಗತಗೊಳಿಸುವಂತಿರಬೇಕು. ರಾಷ್ಟ್ರಾಧ್ಯಕ್ಷರನ್ನು ಹೊರತುಪಡಿಸಿ ಇತರ ಎಲ್ಲಾ ಕೇಂದ್ರ ಸರಕಾರದಿಂದ ಸಂಬಳ, ಗೌರವಧನ ಪಡೆಯುವ ಸರ್ವರಿಗೂ ವಿಚಾರಣೆಗೊಳಪಡಿಸಿ ಸರ್ವೋಚ್ಛ ನ್ಯಾಯಾಲಯದ ಅಡಿಯಲ್ಲಿ ಬರುವ ಪ್ರತ್ಯೇಕ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವ ಪೂರ್ಣ ಅಧಿಕಾರ ಲೋಕಪಾಲರಿಗೆ ಇರಬೇಕು. ವಿಚಾರಣೆ ನಡೆಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಗಳಿಗೆ ಮಾತ್ರ ಇರಬೇಕು.  ಇದರಿಂದಾಗಿ ಲೋಕಪಾಲ್ ಸಂಸ್ಥೆಯು ಸಂವಿಧಾನದ ರೂಪು ರೇಷೆಗಳಿಗೆ ಹೊರತಾದುದು ಮತ್ತು  ಅನಿಯಂತ್ರಿತವಾದುದು ಎಂಬ ಭೀತಿ ದೂರವಾಗುವುದಲ್ಲದೆ ಅದು ಖಂಡಿತವಾಗಿಯೂ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲುದು ಎಂಬುದಾಗಿ ನಮ್ಮ ನಂಬಿಕೆ.