[dropcap]ಗು[/dropcap]ಲ್ಬರ್ಗ ಪೌರ ಆಡಳಿತ ಕಛೇರಿಯ ಮುಂದೆ ಇಂದಿಗೆ 27 ದಿನಗಳಿಂದ ನಗರದ ಪೌರ ಕಾರ್ಮಿಕರು ಉಪವಾಸ ಸತ್ಯಾಗ್ರಹ ಹೂಡಿದ್ದಾರೆ ಯಾಕೆ? 2 ವರ್ಷಗಳಿಂದ ಕಾನೂನಿನ ಪ್ರಕಾರ ನೀಡಬೇಕಿದ್ದ ಯಾವ ಸವಲತ್ತುಗಳನ್ನೂ ಅವರಿಗೆ ನೀಡದೆ, ದುಡಿಸಿ ಸಂಬಳವನ್ನೂ ಕೊಡದೆ, ಉಪವಾಸ ಕೆಡವಿರುವ ನಗರ ಸಭಾ ಆಡಳಿತದ ವಿರುದ್ಧ ಅವರು ತಮ್ಮ ಜೀವವನ್ನೇ ಪಣವಿಟ್ಟು ಉಪವಾಸ ಹೂಡಿದ್ದಾರೆ. ಸರಕಾರವೇ ಅವರನ್ನು ಆತ್ಮಹತ್ಯೆಗೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಸಹಾ ಆತ್ಮಹತ್ಯೆಗೆ ಪ್ರೇರಣೆ ಮತ್ತು ಒತ್ತಡ ಹೇರಿದ ಅಪರಾಧಕ್ಕೆ …